ಚಾಮರಾಜನಗರ: ಕೋತಿ ಸೇರಿದಂತೆ ಇತರೆ ಪುಟ್ಟ ಪ್ರಾಣಿ ಪಕ್ಷಿಗಳಿಂದ ಬೆಳೆಗಳನ್ನು ರಕ್ಷಿಸಲು ರೈತರು ವಿವಿಧ ತಂತ್ರಗಳಿಗೆ ಮೊರೆ ಹೋಗುವುದು ಸಾಮಾನ್ಯ. ಜಿಲ್ಲೆಯ ಹನೂರು ತಾಲ್ಲೂಕಿನ ಅಜ್ಜೀಪುರ ಭಾಗದ ರೈತರೊಬ್ಬರು ನಾಯಿಗೆ ಹುಲಿಯ ಬಣ್ಣ ಬಳಿದು ಬೆಳೆ ರಕ್ಷಿಸುವ ಪ್ರಯೋಗ ಮಾಡಿದ್ದಾರೆ.
ರೈತರು ಯಾರು ಎಂಬುದು ಗೊತ್ತಾಗಿಲ್ಲ. ಅಜ್ಜೀಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ನಾಯಿ ಓಡಾಡುತ್ತಿದ್ದು, ದೂರದಿಂದ ನೋಡುವಾಗ ಹುಲಿಯಂತೆ ಭಾಸವಾಗುತ್ತಿದೆ.
ಹುಲಿಯ ಬಣ್ಣ ಬಳಿದಿರುವ ಶ್ವಾನದ ಫೋಟೊ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.