ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ | ಹೂಗುಚ್ಛ, ಉಡುಗೊರೆ ತರಬೇಡಿ: ಶಾಸಕ ಎಚ್.ಎಂ.ಗಣೇಶಪ್ರಸಾದ್

Published 31 ಮೇ 2023, 15:54 IST
Last Updated 31 ಮೇ 2023, 15:54 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ‘ಪಟ್ಟಣದ ಪ್ರವಾಸಿ ಮಂದಿರ ಹಾಗೂ ಮೈಸೂರಿನ ಮನೆಗೆ ತಮ್ಮನ್ನು ಭೇಟಿ ಮಾಡಲು ಬರುವ ಕ್ಷೇತ್ರದ ಜನರು ಯಾವುದೇ ರೀತಿಯ ಹೂಗುಚ್ಛ, ಹಾರ ಹಾಗೂ ಉಡುಗೊರೆಗಳನ್ನು ತರಬಾರದು’ ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಮನವಿ ಮಾಡಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರ ಹಾಗೂ ಮೈಸೂರಿನ ಮನೆ ಮುಂದೆ ನಾಮಫಲಕ ಅಳವಡಿಸಿ ತಮ್ಮನ್ನು ಭೇಟಿ ಮಾಡುವ ವೇಳೆ ಹೂಗುಚ್ಛ, ಹಾರ ಹಾಗೂ ಉಡುಗೊರೆಗಳನ್ನು ನೀಡಬಾರದು. ಬದಲಿಗೆ ಶಾಲಾ ಮಕ್ಕಳಿಗೆ ಪುಸ್ತಕ, ಲೇಖನಿ ಸಾಮಗ್ರಿಗಳನ್ನು ತನ್ನಿ. ಇಲ್ಲವೇ ಶಾಲೆಗೆ ನೀವೇ ಪುಸ್ತಕಗಳನ್ನು ನೀಡಿ ಎನ್ನುವ ಮೂಲಕ ಅನಗತ್ಯ ಖರ್ಚಿಗೆ ಕಡಿವಾಣ ಹಾಕಿದ್ದಾರೆ.

ಶಾಸಕರನ್ನು ಭೇಟಿ ಮಾಡಲು ಬರುವ ಜನರು ಸನ್ಮಾನಕ್ಕಾಗಿ ಹೂಗುಚ್ಛ, ಹಾರ ತರುವುದನ್ನು ಮನಗಂಡ ಶಾಸಕರು ಈ ರೀತಿಯ ನಿರ್ಧಾರ ಕೈಗೊಂಡಿರುವುದು ಸಾರ್ವಜನಿಕರಲ್ಲಿ ಪ್ರಶಂಸೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT