ಚಾಮರಾಜನಗರ: ‘ಆಹಾರ ಸೇವನೆ ಅವರವರ ಇಚ್ಛೆ. ದೇವಸ್ಥಾನಕ್ಕೆ ಇಂತಹದ್ದನ್ನೇ ತಿಂದು ಹೋಗಬೇಕು ಎಂದು ಯಾರು ಹೇಳಿದ್ದಾರೆ? ಅಲ್ಲಿಗೆ ಬರುವ ಪ್ರತಿಯೊಬ್ಬರನ್ನೂ ಏನು ತಿಂದಿದ್ದಾರೆ ಎಂದು ಪರಿಶೀಲಿಸಲು ಆಗುತ್ತದೆಯೇ. ಈ ಚರ್ಚೆಯಿಂದ ಜನರು, ನಾಡಿಗೇನು ಪ್ರಯೋಜನ’ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದರು.