‘ಬಿಳಿಗಿರಿಬೆಟ್ಟದ ಬಂಗ್ಲೆಪೋಡು, ಮಂಜಿಗುಂಡಿಪೋಡು, ಯರಕನಗದ್ದೆ, ಗೊಂಬೆಗಲ್ಲು ಹಾಗೂ ಬೆಟ್ಟದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಫಿ ಕೊಯ್ಲು ವೇಗ ಪಡೆದುಕೊಂಡಿದೆ. ಮಳೆ ಭೀತಿಯಿಂದ ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲು ಬೆಳೆಗಾರರು ಪರದಾಡುತ್ತಿದ್ದಾರೆ. ಬಿಸಿಲಿನ ತೀವ್ರತೆ ಇಲ್ಲದೆ ಇರುವುದರಿಂದ ಕಟಾವು ಮಾಡಿ ಸಂಗ್ರಹಿಸಿದ ಬೀಜವನ್ನು ಒಣಗಿಸಲು ವಾರಗಟ್ಟಲೆ ಕಾಯಬೇಕಿದೆ. ಈ ನಡುವೆ ತುಂತುರು ಮುಂದುವರಿದರೆ ಕಾಫಿ ಮುಗ್ಗಲು ಕಾಣಿಸಿಕೊಂಡು, ಕೊಳೆಯುತ್ತದೆ’ ಎಂದು ಬಂಗ್ಲೆಪೋಡು ರಂಗೇಗೌಡ ಹೇಳಿದರು.