ಘಟನೆ ಬಗ್ಗೆ ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪರಮೇಶ್ ಅವರು, ’ಆನೆಗಳು ಗ್ರಾಮಗಳ ಕಡೆ ಬರುತ್ತಿರುವ ಬಗ್ಗೆ ದೂರುಗಳು ಬಂದಿತ್ತು. ಅವುಗಳನ್ನು ಕಾಡಿಗೆ ಓಡಿಸುವುದಕ್ಕಾಗಿ ಸಿಬ್ಬಂದಿ ಹೋಗಿದ್ದರು. ಈ ಸಂದರ್ಭದಲ್ಲಿ ಗಂಡಾನೆ ಜೀಪಿನ ಮುಂಭಾಗ ತುಳಿದಿದೆ.ಇದರಿಂದಾಗಿ ಜೀಪು ಪಲ್ಟಿಯಾಗಿದೆ. ಘಟನೆಯಲ್ಲಿ ಸಿಬ್ಬಂದಿಗೆ ಏನೂ ಆಗಿಲ್ಲ‘ ಎಂದರು.