ಜಿಲ್ಲೆಯ ವಿವಿಧ ಕಡೆಗಳಲ್ಲಿ ಹಿಂಗಾರು ಬಿತ್ತನೆ ಆಗಸ್ಟ್ ತಿಂಗಳಲ್ಲೇ ಆರಂಭವಾಗಿದ್ದು, ಬೆಟ್ಟದ ವ್ಯಾಪ್ತಿಯಲ್ಲೂ ಹಲವು ರೈತರು ರಾಗಿ ಬಿತ್ತನೆ ಮಾಡಿದ್ದಾರೆ. ನವೆಂಬರ್ 2ನೇ ವಾರದಲ್ಲಿ ಕೊಯ್ದು ಮಾಡಬೇಕಿತ್ತು. ಆದರೆ, ಐದಾರು ದಿನಗಳಿಂದ ಪ್ರತಿ ದಿನ ಮಳೆ ಸುರಿಯುತ್ತಿರುವುದರಿಂದ ಕೊಯ್ಲು ಮಾಡಲು ಆಗುತ್ತಿಲ್ಲ. ಕೆಲವು ಜಮೀನುಗಳಲ್ಲಿ ರಾಗಿ ಪೈರು ಮಳೆ ಗಾಳಿಗೆ ನೆಲಕ್ಕೆ ಬಾಗಿವೆ. ಇದರಿಂದ ಬೆಳೆ ನಷ್ಟ ಅನುಭವಿಸುವ ಭೀತಿಯನ್ನು ಬೆಳೆಗಾರರು ಎದುರಿಸುತ್ತಿದ್ದಾರೆ.