ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಾಲಚಂದ್ರ ಅವರು, ‘ನನಗೆ ಪ್ರಮೋದ್ ಅವರು ಮಾಹಿತಿ ನೀಡಿದ ತಕ್ಷಣ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಹೋಗಿದ್ದೆ. ಅದು ಅರಣ್ಯ ಪ್ರದೇಶವಾಗಿರಲಿಲ್ಲ. ರೈತರ ಜಮೀನು ಆಗಿತ್ತು. ಅಲ್ಲಿಂದ ಅರಣ್ಯಕ್ಕೆ 2 ಕಿ.ಮೀ ಹೆಚ್ಚು ದೂರವಿತ್ತು. ರಸ್ತೆ ಬದಿಯಲ್ಲೇ ಬೆಂಕಿ ಬಿದಿತ್ತು. ಅದು ಕಾಡು ಅಲ್ಲ ಎಂಬುದು ಯಾರಿಗಾದರೂ ಗೊತ್ತಾಗುತ್ತಿತ್ತು. ಹಾಗಾಗಿ, ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದುಕೊಂಡು ಯುವ ಪತ್ರಕರ್ತನನ್ನು ವಿಚಾರಣೆ ಮಾಡಿದ್ದು ನಿಜ. ಆದರೆ, ನಂತರ ಅವರು ಮಾಹಿತಿ ನೀಡಿದ್ದರಲ್ಲಿ ದುರುದ್ದೇಶ ಇರಲಿಲ್ಲ ಎಂದು ಗೊತ್ತಾದ ತಕ್ಷಣ ಅವರನ್ನು ಬಿಟ್ಟಿದ್ದೇವೆ’ ಎಂದು ಹೇಳಿದರು.