ಲಾಕ್ಡೌನ್ ಜಾರಿಯಲ್ಲಿರುವುದರಿಂದ ತಮಿಳುನಾಡಿನಿಂದ ಜನರು ರಾಜ್ಯಕ್ಕೆ ಬರುವುದಕ್ಕೆ ನಿರ್ಬಂಧವಿದೆ. ಸಂಪಾದನೆಗಾಗಿ ತಮಿಳುನಾಡಿನಲ್ಲಿ ನೆಲೆಕಂಡುಕೊಂಡಿರುವ ಮಹದೇಶ್ವರ ಬೆಟ್ಟ, ಹನೂರಿನ ಸುತ್ತಮುತ್ತಲ ಗ್ರಾಮಗಳ ಜನರು, ಚೆಕ್ಪೋಸ್ಟ್ಗಳಲ್ಲಿ ಸಿಬ್ಬಂದಿ ತಡೆಯುತ್ತಾರೆ ಎಂಬ ಕಾರಣಕ್ಕೆ ಅರಣ್ಯದಲ್ಲಿರುವ ಕಾಲುದಾರಿಗಳ ಮೂಲಕ ತಮ್ಮ ಊರುಗಳಿಗೆ ವಾಪಸ್ ಆಗುತ್ತಿದ್ದಾರೆ.