ಗುಡ್ ಫ್ರೈಡೆ ಆಚರಣೆಗೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚಾಮರಾಜನಗರದ ಸೇಂಟ್ ಪೌಲ್ ಚರ್ಚ್ನ ಧರ್ಮಗುರು ಜೋಸೆಫ್ ಮರಿ ಅವರು, ‘ಕೊರೊನಾ ಕಾರಣಕ್ಕೆ ದಿಗ್ಬಂಧನ ಹೇರಲಾಗಿರುವುದರಿಂದ ಚರ್ಚ್ಗಳನ್ನು ತೆರೆಯಬಾರದು, ಭಕ್ತರು ಅಲ್ಲಿಗೆ ಬರಬಾರದು, ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಬೇಕು ಎಂದು ಧರ್ಮಾಧ್ಯಕ್ಷರು ಆದೇಶ ಹೊರಡಿಸಿದ್ದರು. ಅದರಂತೆ ಎಲ್ಲರೂ ಅವರರವರ ಮನೆಗಳಲ್ಲಿ ಪ್ರಾರ್ಥನೆ ನಡೆಸಿದ್ದಾರೆ. ಮನೆಗಳಲ್ಲೂ ಗುಂಪು ಗುಂಪಾಗಿ ಸೇರಬಾರದು ಎಂದೂ ಸೂಚಿಸಲಾಗಿತ್ತು.ಸಮುದಾಯದ ವಿವಿಧ ಧರ್ಮಗುರುಗಳು ಮಾಡುವ ಪ್ರಾರ್ಥನೆಯನ್ನು ಯೂಟ್ಯೂಬ್ ಮೂಲಕ ನೇರ ಪ್ರಸಾರ ಮಾಡಲಾಗಿದ್ದು, ಅದನ್ನು ನೋಡುತ್ತಾ ಪ್ರಾರ್ಥನೆ ಸಲ್ಲಿಸಿದವರೂ ಇದ್ದಾರೆ’ ಎಂದು ಹೇಳಿದರು.