<p>ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿ–ಬಂಡಿಗೆರೆ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ಕಾಮಾಕ್ಷಾಂಬಾ ಸಮೇತ ದಿವ್ಯ ಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.</p>.<p>ಬೆಳಿಗ್ಗೆ 10.30ಕ್ಕೆ ಜೇಷ್ಠ ನಕ್ಷತದ ಶುಭ ಮೇಷ ಲಗ್ನದ ಅಭಿಜಿನ್ ಮುಹೂರ್ತದಲ್ಲಿ ಬ್ರಹ್ಮ ತರಧೋತ್ಸವಕ್ಕೆ ಗ್ರಾಮದ ಕೋಮುವಾರು ಯಜಮಾನರು ಹಾಗೂ ಗ್ರಾಮಸ್ಥರು ಚಾಲನೆ ನೀಡಿದರು. ಈ ಸಂದರ್ಭ ಭಕ್ತರ ಜಯಘೋಷ ಮುಗಿಲುಮುಟ್ಟಿತು. ಗ್ರಾಮದ ರಥ ಬೀದಿಗಳಲ್ಲಿ ಸಂಚರಿಸಿದ ರಥ ಮಧ್ಯಾಹ್ನ 1.20ಕ್ಕೆ ಸ್ವಸ್ಧಾನ ಸೇರಿತು. </p>.<p>ರಥೋತ್ಸವಕ್ಕೂ ಮುನ್ನ ಮುತ್ಸವ ಮೂರ್ತಿಗೆ ದೇವಸ್ಧಾನದ ರಥಬೀದಿಯಲ್ಲಿ ಉತ್ಸವ ನಡೆಸಿ ರಥಾರೋಹಣ ಮಾಡಲಾಯಿತು. ರಥದ ಮುಂಭಾಗ ಮಹದೇಶ್ವರ ದೇವಸ್ಥಾನದ ಬಸವನ ಮೆರವಣಿಗೆ ನಡೆಯಿತು. ರಥ ಸಂಚರಿಸುವ ಮಾರ್ಗದಲ್ಲಿ ಭಕ್ತರಿಗೆ ಪಾನಕ, ಮಜ್ಜಿಗೆ ವಿತರಿಸಲಾಯಿತು. ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯ ಅಂದ ಹೆಚ್ಚಿಸಿದ್ದವು.</p>.<p>ಭಕ್ತರು ಮಹಾದೇವವನ್ನು ಸ್ಮರಿಸುತ್ತ ಮಳೆ–ಬೆಳೆ ಸಮೃದ್ಧಿಗೆ ಪ್ರಾರ್ಥಿಸಿದರು. ಹರದನಹಳ್ಳಿ–ಬಂಡಿಗೆರೆ, ತಾವರೆಕಟ್ಟೆ ಮೋಳೆ, ಬ್ಯಾಡಮೂಡ್ಲು, ಚಿಕ್ಕ ಮೊಳೆ, ದೊಡ್ಡ ಮೊಳೆ, ಸೋಮವಾರಪೇಟೆ, ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ತಮಿಳುನಾಡಿನಿಂದಲೂ ಭಕ್ತರು ಬಾಗವಹಿಸಿದ್ದರು. ರಥೋತ್ಸವದ ಪ್ರಯುಕ್ತ ಗ್ರಾಮದ ಪ್ರಮುಖ ಸ್ಧಳಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.</p>.<p><strong>ಸ್ವಯಂಸೇವಕರ ಶ್ರಮದಾನ:</strong></p>.<p>ಹರದನಹಳ್ಳಿ ಮತ್ತು ಬಂಡಿಗೆರೆ ಗ್ರಾಮದ ಸ್ವಯಂಸೇವಕರ ತಂಡ ದೇವಸ್ಥಾನದ ಆವರಣದಲ್ಲಿ ಶ್ರಮದಾನ ಮಾಡಿ ಸುತ್ತಲೂ ಬೆಳೆದಿದ್ದ ಕಳೆಗಿಡಗಳನ್ನು ತೆರವುಗೊಳಿಸಿದ್ದರು. ದೇವಸ್ಥಾನ ಆವರಣದಲ್ಲಿ ನಿರ್ವಹಣೆ ಇಲ್ಲದೆ ಒಣಗುತ್ತಿದ್ದ ಗಿಡಿಗಳಿಗೆ ನೀರು ಹಾಕಿ, ಆವರಣವನ್ನು ಸ್ವಚ್ಛಗೊಳಿಸಿದರು. ಗಿರೀಶ್, ನಾಗಣ್ಣ, ಕುಮಾರ್, ಬಸವಣ್ಣ, ಜಯಣ್ಣ ಅವರ ನೇತೃತ್ವದಲ್ಲಿ ಶ್ರಮಿಸಲಾಯಿತು. ಶ್ರೀಮಾತೆ ಶಾರದಾ ದೇವಿ ಭಜನಾ ಮಂಡಳಿಯ ವತಿಯಿಂದ ದೇವಸ್ಥಾನದ ಒಳಾಂಗಣ ಆವರಣದಲ್ಲಿ ಸ್ವಚ್ಛತೆ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿ–ಬಂಡಿಗೆರೆ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ಕಾಮಾಕ್ಷಾಂಬಾ ಸಮೇತ ದಿವ್ಯ ಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.</p>.<p>ಬೆಳಿಗ್ಗೆ 10.30ಕ್ಕೆ ಜೇಷ್ಠ ನಕ್ಷತದ ಶುಭ ಮೇಷ ಲಗ್ನದ ಅಭಿಜಿನ್ ಮುಹೂರ್ತದಲ್ಲಿ ಬ್ರಹ್ಮ ತರಧೋತ್ಸವಕ್ಕೆ ಗ್ರಾಮದ ಕೋಮುವಾರು ಯಜಮಾನರು ಹಾಗೂ ಗ್ರಾಮಸ್ಥರು ಚಾಲನೆ ನೀಡಿದರು. ಈ ಸಂದರ್ಭ ಭಕ್ತರ ಜಯಘೋಷ ಮುಗಿಲುಮುಟ್ಟಿತು. ಗ್ರಾಮದ ರಥ ಬೀದಿಗಳಲ್ಲಿ ಸಂಚರಿಸಿದ ರಥ ಮಧ್ಯಾಹ್ನ 1.20ಕ್ಕೆ ಸ್ವಸ್ಧಾನ ಸೇರಿತು. </p>.<p>ರಥೋತ್ಸವಕ್ಕೂ ಮುನ್ನ ಮುತ್ಸವ ಮೂರ್ತಿಗೆ ದೇವಸ್ಧಾನದ ರಥಬೀದಿಯಲ್ಲಿ ಉತ್ಸವ ನಡೆಸಿ ರಥಾರೋಹಣ ಮಾಡಲಾಯಿತು. ರಥದ ಮುಂಭಾಗ ಮಹದೇಶ್ವರ ದೇವಸ್ಥಾನದ ಬಸವನ ಮೆರವಣಿಗೆ ನಡೆಯಿತು. ರಥ ಸಂಚರಿಸುವ ಮಾರ್ಗದಲ್ಲಿ ಭಕ್ತರಿಗೆ ಪಾನಕ, ಮಜ್ಜಿಗೆ ವಿತರಿಸಲಾಯಿತು. ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯ ಅಂದ ಹೆಚ್ಚಿಸಿದ್ದವು.</p>.<p>ಭಕ್ತರು ಮಹಾದೇವವನ್ನು ಸ್ಮರಿಸುತ್ತ ಮಳೆ–ಬೆಳೆ ಸಮೃದ್ಧಿಗೆ ಪ್ರಾರ್ಥಿಸಿದರು. ಹರದನಹಳ್ಳಿ–ಬಂಡಿಗೆರೆ, ತಾವರೆಕಟ್ಟೆ ಮೋಳೆ, ಬ್ಯಾಡಮೂಡ್ಲು, ಚಿಕ್ಕ ಮೊಳೆ, ದೊಡ್ಡ ಮೊಳೆ, ಸೋಮವಾರಪೇಟೆ, ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ತಮಿಳುನಾಡಿನಿಂದಲೂ ಭಕ್ತರು ಬಾಗವಹಿಸಿದ್ದರು. ರಥೋತ್ಸವದ ಪ್ರಯುಕ್ತ ಗ್ರಾಮದ ಪ್ರಮುಖ ಸ್ಧಳಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.</p>.<p><strong>ಸ್ವಯಂಸೇವಕರ ಶ್ರಮದಾನ:</strong></p>.<p>ಹರದನಹಳ್ಳಿ ಮತ್ತು ಬಂಡಿಗೆರೆ ಗ್ರಾಮದ ಸ್ವಯಂಸೇವಕರ ತಂಡ ದೇವಸ್ಥಾನದ ಆವರಣದಲ್ಲಿ ಶ್ರಮದಾನ ಮಾಡಿ ಸುತ್ತಲೂ ಬೆಳೆದಿದ್ದ ಕಳೆಗಿಡಗಳನ್ನು ತೆರವುಗೊಳಿಸಿದ್ದರು. ದೇವಸ್ಥಾನ ಆವರಣದಲ್ಲಿ ನಿರ್ವಹಣೆ ಇಲ್ಲದೆ ಒಣಗುತ್ತಿದ್ದ ಗಿಡಿಗಳಿಗೆ ನೀರು ಹಾಕಿ, ಆವರಣವನ್ನು ಸ್ವಚ್ಛಗೊಳಿಸಿದರು. ಗಿರೀಶ್, ನಾಗಣ್ಣ, ಕುಮಾರ್, ಬಸವಣ್ಣ, ಜಯಣ್ಣ ಅವರ ನೇತೃತ್ವದಲ್ಲಿ ಶ್ರಮಿಸಲಾಯಿತು. ಶ್ರೀಮಾತೆ ಶಾರದಾ ದೇವಿ ಭಜನಾ ಮಂಡಳಿಯ ವತಿಯಿಂದ ದೇವಸ್ಥಾನದ ಒಳಾಂಗಣ ಆವರಣದಲ್ಲಿ ಸ್ವಚ್ಛತೆ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>