‘ರೈತರಿಗೆ ಇಸಿ ಮತ್ತು ಆರ್ಟಿಸಿ ಸಿಗದಿರುವುದು ಸರ್ಕಾರದ ಸಮಸ್ಯೆ. ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಸೊಸೈಟಿ ಸಾಲವನ್ನು ನಂಬಿರುವ ಅನೇಕ ರೈತರು ಇದ್ದಾರೆ. ತಾಲ್ಲೂಕು ಮತ್ತು ಜಿಲ್ಲಾಡಳಿತ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕು ಇಲ್ಲವಾದಲ್ಲಿ ವಿನಾಯಿತಿ ನೀಡಿ ಸಾಲ ನೀಡಬೇಕು’ ಎಂದು ಶಿವಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿರ್ದೇಶಕ ಬಿ.ಎಂ.ಮಂಜಪ್ಪ ಆಗ್ರಹಿಸಿದರು.