<p>ಹನೂರು: ತಾಲ್ಲೂಕಿನ ಅಜ್ಜೀಪುರ – ದೊಮ್ಮನಗದ್ದೆ ಮಾರ್ಗ ಮಧ್ಯೆ ಇರುವ ಜಡೇಸ್ವಾಮಿ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.</p>.<p>ಕೊಂಡೋತ್ಸವವನ್ನು 2014ರಲ್ಲಿ ನಡೆಸಲಾಗಿತ್ತು. 12 ವರ್ಷಗಳ ನಂತರ ಅಜ್ಜೀಪುರ, ಸುತ್ತಲಿನ ಗ್ರಾಮಸ್ಥರು ಕೊಂಡೋತ್ಸವವನ್ನು ಸಾಂಪ್ರದಾಯಿಕವಾಗಿ ನೇರವೇರಿಸಿದರು.</p>.<p>ಸೋಮವಾರ ಜಡೇಸ್ವಾಮಿ ಸ್ವಾಮಿಗೆ ವಿಶೇಷ ಪುಷ್ಪ ಅಲಂಕಾರ ಮಾಡಲಾಗಿತ್ತು. ಸಂಜೆ 5 ಗಂಟೆಗೆ ಮಹದೇಶ್ವರ ದೇವಾಲಯದ ಬಳಿ ಸ್ವಾಮಿಯ ಗಂಡುಗೋರಲಿ, ಸತ್ತಿಗೆ, ಸೂರಪಾನಿ ಅಲಂಕರಿಸಿ ಪೂಜೆ ಸಲ್ಲಿಸಿದರು. ಮೆರವಣಿಗೆಯಲ್ಲಿ ವಾದ್ಯ ಮೇಳಗಳೊಂದಿಗೆ ದೇವರು , ಸತ್ತಿಗೆ, ಸುರಾಪನಿ, ಹಾಲಾರವಿ ನೇರವೇರೀಸಲಾಯಿತು. 6 ಗಂಟೆಗೆ ಅರ್ಚಕರು, ಹರಕೆ ಹೊತ್ತ ಭಕ್ತರು ಕೊಂಡ ಹಾಯ್ದರು.</p>.<p>ಅನ್ನ ಸಂತರ್ಪಣೆ: ಕೊಂಡೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಮುದ್ದೆ, ಅನ್ನ, ದ್ವಿದಳ ಧಾನ್ಯದ ಸಾಂಬಾರು, ಪಾಯಸ, ಪಲ್ಯಗಳ ಅನ್ನ ಸಂತರ್ಪಣೆ ಮಾಡಲಾಯಿತು.</p>.<p>ಅರ್ಚಕರಾದ ಚಿನ್ನು, ನಾಗರಾಜ್, ಮುನಿರಾಜು, ರಾಜೇಂದ್ರ, ಚಂದು, ಗಾವಳಿ ಪಚ್ಚಮ್ಮಲ್ಲೇಗೌಡ, ಶಂಕರ್, ರಾಜೇಶ್, ಯಜಮಾನರಾದ ರಾಮೇಗೌಡ, ಮುತ್ತೇಗೌಡ, ಕುಪ್ಪೆಗೌಡ, ಭಕ್ತರು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260422-37-179167710</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹನೂರು: ತಾಲ್ಲೂಕಿನ ಅಜ್ಜೀಪುರ – ದೊಮ್ಮನಗದ್ದೆ ಮಾರ್ಗ ಮಧ್ಯೆ ಇರುವ ಜಡೇಸ್ವಾಮಿ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.</p>.<p>ಕೊಂಡೋತ್ಸವವನ್ನು 2014ರಲ್ಲಿ ನಡೆಸಲಾಗಿತ್ತು. 12 ವರ್ಷಗಳ ನಂತರ ಅಜ್ಜೀಪುರ, ಸುತ್ತಲಿನ ಗ್ರಾಮಸ್ಥರು ಕೊಂಡೋತ್ಸವವನ್ನು ಸಾಂಪ್ರದಾಯಿಕವಾಗಿ ನೇರವೇರಿಸಿದರು.</p>.<p>ಸೋಮವಾರ ಜಡೇಸ್ವಾಮಿ ಸ್ವಾಮಿಗೆ ವಿಶೇಷ ಪುಷ್ಪ ಅಲಂಕಾರ ಮಾಡಲಾಗಿತ್ತು. ಸಂಜೆ 5 ಗಂಟೆಗೆ ಮಹದೇಶ್ವರ ದೇವಾಲಯದ ಬಳಿ ಸ್ವಾಮಿಯ ಗಂಡುಗೋರಲಿ, ಸತ್ತಿಗೆ, ಸೂರಪಾನಿ ಅಲಂಕರಿಸಿ ಪೂಜೆ ಸಲ್ಲಿಸಿದರು. ಮೆರವಣಿಗೆಯಲ್ಲಿ ವಾದ್ಯ ಮೇಳಗಳೊಂದಿಗೆ ದೇವರು , ಸತ್ತಿಗೆ, ಸುರಾಪನಿ, ಹಾಲಾರವಿ ನೇರವೇರೀಸಲಾಯಿತು. 6 ಗಂಟೆಗೆ ಅರ್ಚಕರು, ಹರಕೆ ಹೊತ್ತ ಭಕ್ತರು ಕೊಂಡ ಹಾಯ್ದರು.</p>.<p>ಅನ್ನ ಸಂತರ್ಪಣೆ: ಕೊಂಡೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಮುದ್ದೆ, ಅನ್ನ, ದ್ವಿದಳ ಧಾನ್ಯದ ಸಾಂಬಾರು, ಪಾಯಸ, ಪಲ್ಯಗಳ ಅನ್ನ ಸಂತರ್ಪಣೆ ಮಾಡಲಾಯಿತು.</p>.<p>ಅರ್ಚಕರಾದ ಚಿನ್ನು, ನಾಗರಾಜ್, ಮುನಿರಾಜು, ರಾಜೇಂದ್ರ, ಚಂದು, ಗಾವಳಿ ಪಚ್ಚಮ್ಮಲ್ಲೇಗೌಡ, ಶಂಕರ್, ರಾಜೇಶ್, ಯಜಮಾನರಾದ ರಾಮೇಗೌಡ, ಮುತ್ತೇಗೌಡ, ಕುಪ್ಪೆಗೌಡ, ಭಕ್ತರು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260422-37-179167710</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>