‘100 ಮಂದಿ ಸಂತ್ರಸ್ತರಲ್ಲಿ 65 ಮಂದಿ ಬಂದಿದ್ದರು. ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ಇದ್ದರು. ಇಸಿಜಿ, ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ, ಹಿಮೋಗ್ಲೋಬಿನ್ ಮಟ್ಟ, ಅಪೌಷ್ಟಿಕತೆ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಿದ್ದೇವೆ. ಅಪೌಷ್ಟಿಕತೆಯಂತಹ ಸಮಸ್ಯೆ ಕೆಲವರಲ್ಲಿ ಕಂಡು ಬಂದಿದೆ. ವೈದ್ಯಕೀಯ ಸಲಹೆಯನ್ನೂ ನೀಡಲಾಗಿದೆ. ತಪಾಸಣೆ ವೇಳೆ ಕಂಡು ಬಂದ ವಿವರಗಳನ್ನು ಜಿಲ್ಲಾಧಿಕಾರಿ ಅವರಿಗೆ ವರದಿ ರೂಪದಲ್ಲಿ ನೀಡಲಾಗುವುದು’ ಎಂದು ಜಿಲ್ಲಾಸ್ಪತ್ರೆಯ ಅರಿವಳಿಕೆ ತಜ್ಞ ಡಾ.ಎಂ.ಮಹೇಶ್ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.