ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಮಹೋತ್ಸವಕ್ಕೆ ಪಾರಂಪರಿಕ ನಡಿಗೆ ಮೆರಗು

Last Updated 5 ಅಕ್ಟೋಬರ್ 2019, 9:33 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವಕ್ಕೆ ಪಾರಂಪರಿಕ ನಡಿಗೆ ಮತ್ತಷ್ಟು ಮೆರಗು ನೀಡಿತು. ದಸರಾ ಮಹೋತ್ಸವದ ನಾಲ್ಕನೇ ದಿನವಾದ ಶುಕ್ರವಾರನಗರದ ಜನನ ಮಂಟಪದ ಬಳಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ. ಆನಂದಕುಮಾರ್‌ ಅವರು ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

ಶ್ರೀವಿಜಯ ಪಾರ್ಶ್ವನಾಥಸ್ವಾಮಿ ಜೈನ ದೇವಾಲಯ, ವೀರಭಧ್ರಸ್ವಾಮಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ನಡೆಸಲಾಯಿತು. ನಡಿಗೆಯು ಜನನ ಮಂಟಪದಿಂದಆರಂಭಗೊಂಡುಹಳೇ ಖಾಸಗಿ ಬಸ್ ನಿಲ್ದಾಣ, ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ, ದೊಡ್ಡ ಅಂಗಡಿ ಬೀದಿ, ರಥದ ಬೀದಿ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆಮಾರ್ಗವಾಗಿಜಿಲ್ಲಾಡಳಿತ ಭವನದಲ್ಲಿ ಅಂತ್ಯಗೊಂಡಿತು.

ಉಡುಗೆ ತೊಡುಗೆ: ಈ ಬಾರಿ ಪಾರಂಪರಿಕ ಉಡುಗೆಯನ್ನು ತೊಟ್ಟಪುರುಷರು ಪಂಜೆ, ಶರ್ಟ್, ಶಲ್ಯ ಧರಿಸಿದ್ದರೆ, ಮಹಿಳೆಯರು ಸೀರೆ ಧರಿಸಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ವಿವಿಧ ಶಾಲಾ– ಕಾಲೇಜು ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಪಾರಂಪರಿಕನಡಿಗೆಯಲ್ಲಿ ಭಾಗವಹಿಸುವ ಮೂಲಕ ಪಾರಂಪರಿಕ ನಡಿಗೆಯ ಅಂದ ಹೆಚ್ಚಿಸಿದರು.

ತಂದೆಯ ನೆನಪಿಗಾಗಿಸ್ಮಾರಕ: ಹಿರಿಯ ರಂಗಕರ್ಮಿ ಕೆ. ವೆಂಕಟರಾಜು ಮಾತನಾಡಿ, ‘ಚಾಮರಾಜೇಂದ್ರ ಒಡೆಯರ್ ಅವರು ಚಾಮರಾಜನಗರದಲ್ಲಿ ಜನಿದರು.ಇವರ ಮಗ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು 1818 ರಲ್ಲಿ ‘ಅರಿಕುಠಾರ’ ಆಗಿದ್ದ ಗ್ರಾಮವನ್ನು ಚಾಮರಾಜನಗರಎಂದುಹೆಸರು ಬದಲಿಸಿದರು.ಬಳಿಕ1826 ರಲ್ಲಿ ದೇವಸ್ಥಾನವೊಂದನ್ನು ಕಟ್ಟಿಸಿದನು. ತಂದೆ ಅವರನೆನಪಿಗಾಗಿ ಜನನ ಮಂಟಪವನ್ನು ಸ್ಮಾರಕ ಮಾಡಿದರು’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ವೈ. ಸೋಮಶೇಖರ್, ಡಿಡಿಪಿಐ ಮಂಜುನಾಥ್, ನಗರಸಭೆ ಆಯುಕ್ತ ರಾಜಣ್ಣ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT