ಬಲಿದಾನ ಇಲ್ಲದೆ ಬದಲಾವಣೆ ಇಲ್ಲ: ‘ಚಾಮರಾಜನಗರದ ಗಣೇಶೋತ್ಸವಕ್ಕೆ ಇತಿಹಾಸ ಇದೆ. ಮನೋರಂಜನೆಗಾಗಿ ಗಣೇಶೋತ್ಸವವನ್ನು ಆಚರಿಸುತ್ತಿಲ್ಲ. ಈ ಉತ್ಸವವು ಧೈರ್ಯದ ಪಾಠ ಹೇಳುತ್ತದೆ. ಧೈರ್ಯವು ಸಮಾಜ ಹಾಗೂ ಮನೆಯನ್ನು ಉಳಿಸುತ್ತದೆ. ಹಲವು ರಾಷ್ಟ್ರನಾಯಕರು ತಮ್ಮ ಪ್ರಾಣವನ್ನು ಬದಲಿದಾನ ಮಾಡಿ ಸ್ವಾತಂತ್ರ್ಯ ತಂದುಕೊಟ್ಟರು. ಬಲಿದಾನ ಇಲ್ಲದೆ ಬದಲಾವಣೆ ಇಲ್ಲ. ಹುಟ್ಟುವುದು ಒಮ್ಮೆ, ಸಾಯುವುದೂ ಒಮ್ಮೆಯೇ. ಸಾವಿಗೆ ಅಂಜುವ ವ್ಯಕ್ತಿ ಬದುಕುವುದಿಲ್ಲ. ಬದುಕುವ ವ್ಯಕ್ತಿ ಸಾವಿಗೆ ಹೆದರುವುದಿಲ್ಲ.ಧರ್ಮ, ದೇಶ, ಹಕ್ಕು, ಸ್ವಾತಂತ್ರ್ಯಕ್ಕಾಗಿ ಸಾಯುವ ತಲೆಮಾರನ್ನು ಸೃಷ್ಟಿ ಮಾಡಿದಾಗ ಮುಂದಿನ ಪೀಳಿಗೆ ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತದೆ. ನಾಯಿ, ನರಿಗಳು ಸತ್ತಂತೆ ಹಿಂದುಗಳ ಬದುಕು ಆಗಬಾರದು’ ಎಂದು ಜಗದೀಶ್ ಕಾರಂತ ಅವರು ಹೇಳಿದರು.