ಇಂದು ರಕ್ತದಾನ: ಪ್ರತಿಭಟನೆಯ ಭಾಗವಾಗಿ ಕಿರಿಯ ವೈದ್ಯರು ಬುಧವಾರವೇ ರಕ್ತದಾನ ಶಿಬಿರ ಆಯೋಜಿಸಿದ್ದರು. ಆದರೆ, ಐಎಂಎ ಸದಸ್ಯರ ಜೊತೆಯಲ್ಲಿ ರಕ್ತದಾನ ಮಾಡಲು ನಿರ್ಧರಿಸಲಾಗಿತ್ತು. ಬುಧವಾರ ಮಧ್ಯಾಹ್ನದ ಮೇಲೆ ಐಎಂಎ ಸದಸ್ಯರು ಪ್ರತಿಭಟನಾ ಸ್ಥಳಕ್ಕೆ ಬಂದಿದ್ದರಿಂದ ರಕ್ತದಾನ ಸಾಧ್ಯವಾಗಿಲ್ಲ. ಗುರುವಾರ ಬೆಳಿಗ್ಗೆ ರಕ್ತದಾನ ಶಿಬಿರ ನಡೆಸುವುದಾಗಿ ಡಾ.ಧೀಮಂತ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.