ಇದೇ ತಿಂಗಳ 3ರಂದು ಹಿರಿಯ ಸಿವಿಲ್ ನ್ಯಾಯಾಧೀಶ ಗಣಪತಿ ಜಿ.ಬಾದಾಮಿ ಅವರು ಪರಿಶೀಲನೆಗಾಗಿ ಸಿಇಎನ್ ಠಾಣೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಠಾಣೆಯ ಬಾಗಿಲು ಹಾಕಿತ್ತು. ಅಲ್ಲಿ ಯಾರೂ ಇರಲಿಲ್ಲ. 10 ನಿಮಿಷಗಳ ನಂತರ ಒಬ್ಬರು ಸಿಬ್ಬಂದಿ ಬಂದರು. ಠಾಣಾ ದಿನಚರಿ ಪುಸ್ತಕ, ನ್ಯಾಯಾಧೀಶರ ಭೇಟಿ ಪುಸ್ತಕವೂ ಠಾಣೆಯಲ್ಲಿ ಇರಲಿಲ್ಲ. ಈ ಸಂಬಂಧ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರಿಗೆ ವರದಿ ನೀಡಿದ್ದರು.