ಸೈಬರ್, ಆರ್ಥಿಕ ಅಪರಾಧ ಹಾಗೂ ಮಾದಕ ದ್ರವ್ಯ ತಡೆ ಠಾಣೆಯ ಇನ್ಸ್ಪೆಕ್ಟರ್ ಮಹದೇವಶೆಟ್ಟಿ ಮಾತನಾಡಿ, ‘ಮಕ್ಕಳನ್ನು ಒಬ್ಬಂಟಿಯಾಗಲು ಬಿಡಬೇಡಿ. ಏಕಾಂಗಿತನವೂ ಮಾದಕ ವ್ಯಸನಕ್ಕೆ ಕರೆದೊಯುತ್ತದೆ. ಮಾದಕ ಪದಾರ್ಥಗಳನ್ನು ಸೇವಿಸಿ ದಾಸರಾಗುವುದರಿಂದ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳಲ್ಲಿಯೂ ತೊಡಗಲು ಕಾರಣವಾಗಬಹುದು. ಕೊನೆಯಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ’ ಎಂದು ಹೇಳಿದರು.