‘ವಿಲೇವಾರಿಯಾಗಿರುವ 3,761 ಪ್ರಕರಣಗಳಿಂದ ಒಟ್ಟು ₹5,41,24,519 ಸಂಗ್ರಹವಾಗಿದ್ದು, ಈ ಮೊತ್ತವನ್ನು ಭೂಸ್ವಾಧೀನ ಹಾಗೂ ಅಪಘಾತ ಪ್ರಕರಣಗಳ ವಿಮಾ ಪರಿಹಾರ ನೀಡಲು ಬಳಸಲಾಗುತ್ತದೆ. ಇತ್ಯರ್ಥವಾದ ಪ್ರಕರಣಗಳಿಂದ ನ್ಯಾಯಾಲಯದ ಹೊರೆ ತಗ್ಗಿದೆ. ಲೋಕ್ ಅದಾಲತ್ನಿಂದ ಜನಸಾಮಾನ್ಯರ ಸಮಯ, ಶ್ರಮ, ಹಣ ಉಳಿತಾಯವಾಗಿದೆ’ಎಂದು ಅವರು ತಿಳಿಸಿದರು.