ಶಾಸಕ ಯತೀಂದ್ರ ಸಿದ್ಧರಾಮಯ್ಯ ಮಾತನಾಡಿ, 'ಇದು ಹೇಡಿಗಳು ನಡೆಸಿದ ಕೃತ್ಯ. ದಾಳಿ ನಡೆಸಿದವರಿಗೆ ಸೈದ್ಧಾಂತಿಕವಾಗಿ ಗಟ್ಟಿತನ ಇಲ್ಲ. ಬಿಜೆಪಿಗರು ಹಿಂಸಾಚಾರದ ಮೂಲಕ ಗಲಾಟೆಗೆ ಇಳಿದಿದ್ದಾರೆ. ಯಾರಲ್ಲಿ ಸೈದ್ದಾಂತಿಕವಾಗಿ ಗಟ್ಟಿತನ ಇಲ್ಲವೋ ಅಲ್ಲಿ ಹಿಂಸಾಚಾರವಾಗುತ್ತದೆ. ಬಿಜೆಪಿಗರು ಪಕ್ಷದವರಿಂದ ಹಿಂಸಾಚಾರ ಮಾಡಿಸುತ್ತಾರೆ. ಒಬ್ಬ ವಿರೋಧ ಪಕ್ಷದ ನಾಯಕನಿಗೆ ರಕ್ಷಣೆ ಇಲ್ಲದಿದ್ದರೆ ಸಾಮಾನ್ಯ ಜನರಿಗೆ ಹೇಗೆ ರಕ್ಷಣೆ ಸಿಗಲು ಸಾಧ್ಯ?' ಎಂದು ವಾಗ್ದಾಳಿ ನಡೆಸಿದರು.