‘ಇದು ಅಂತಿಮ ಹಂತದ ಅಭಿಪ್ರಾಯ ಸಂಗ್ರಹ. ‘ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಗೆ ಸೇರಲು ಬಯಸಿದ್ದೇನೆ. ಆದರೆ, ನೀವು ಹೇಳಿದರೆ ಮಾತ್ರ ಸೇರುತ್ತೇನೆ. ಇಲ್ಲದಿದ್ದರೆ, ಇಲ್ಲ’ ಎಂದು ಮಹೇಶ್ ಅವರು ಕಾರ್ಯಕರ್ತರಿಗೆ ಹೇಳುತ್ತಿದ್ದಾರೆ. ತಮ್ಮ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಕಾರ್ಯಕರ್ತರು ಎಲ್ಲ ಸಭೆಗಳಲ್ಲಿ ಮಹೇಶಣ್ಣಗೆ ತಿಳಿಸಿದ್ದಾರೆ ಎಂದು ಅವರ ಆಪ್ತರೊಬ್ಬರು ತಿಳಿಸಿದರು.