ಸಂತೇಮರಹಳ್ಳಿಯಲ್ಲಿ ಮಾತನಾಡಿದ ಅವರು, ‘ಇದು ಸ್ಥಳೀಯ ಚುನಾವಣೆಯಾಗಿರುವುದರಿಂದ ಹೈಕಮಾಂಡ್ ಜೊತೆಗೆ ಮಾತುಕತೆಯ ಅಗತ್ಯವಿಲ್ಲ. ಅವರ ಮುಖಂಡರು ಕೂಡ ನಾವು ನಾವೇ ಮಾತನಾಡಿಕೊಳ್ಳೋಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ನಿರ್ಧಾರ ಮಾಡುವುದನ್ನು ಕಾಂಗ್ರೆಸ್ಗೆ ಬಿಟ್ಟು ಬಿಟ್ಟಿದ್ದೇವೆ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರು ಎರಡು ಮೂರು ದಿನಗಳ ಹಿಂದೆ ಘೋಷಿಸಿದ್ದಾರೆ. ಒಪ್ಪಂದದ ಪ್ರಕಾರ, ಈ ಬಾರಿ ನಮಗೇ ಮೇಯರ್ ಸ್ಥಾನ ಸಿಗಬೇಕು. ಅದನ್ನು ಜೆಡಿಎಸ್ಗೆ ತಿಳಿಸಿದ್ದೇವೆ. ನಮ್ಮ ವರಿಷ್ಠರು ಕೂಡ ಅದೇ ಮಾತನ್ನು ಹೇಳಿದ್ದಾರೆ’ ಎಂದರು.