ತಾಲ್ಲೂಕಿನ ಮದ್ಯಪ್ರಿಯರಿಗೆ ಪ್ರತಿ ದಿನ ಸೂರ್ಯೋದಯಕ್ಕೂ ಮುಂಚೆಯೇ ಮದಿರೆ ಸಿಗಬೇಕು. ಇಲ್ಲದಿದ್ದರೆ ಕೈ ನಡುಕ ಬರುತ್ತದೆ, ಕೆಲಸ ಮಾಡಲು ಆಗುವುದಿಲ್ಲ ಎಂಬ ನೆಪಗಳನ್ನೆಲ್ಲ ಒಡ್ಡುತ್ತಿದ್ದರು. ಕೂಲಿ ಮಾಡಿ ಸಂಪಾದಿಸಿದ ಹಣವನ್ನೆಲ್ಲ ಕುಡಿತಕ್ಕೆ ವ್ಯಯಿಸುತ್ತಿದ್ದರು. ಮನೆಯಲ್ಲಿ ಸದಸ್ಯರೊಂದಿಗೆ ದಿನಾ ಜಗಳವಾಡಿ ಇಡೀ ಮನೆಯ ನೆಮ್ಮದಿ ಹಾಳು ಮಾಡುತ್ತಿದ್ದರು.