ಮಹದೇಶ್ವರ ಬೆಟ್ಟ: ಕೋವಿಡ್–19 ಹಾವಳಿ ಇಲ್ಲಿನ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರದ ಆದಾಯದ ಮೇಲೂ ತೀವ್ರ ಪರಿಣಾಮ ಬೀರಿದೆ.
ಜೂನ್ 27ರಿಂದ ಸೆಪ್ಟೆಂಬರ್ 17ರವರೆಗಿನ, 82 ದಿನಗಳ ಅವಧಿಯಲ್ಲಿ ದೇವಾಲಯದ ಹುಂಡಿಗಳಲ್ಲಿ ₹1.47 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಲಾಕ್ಡೌನ್ಗಿಂತಲೂ ಮೊದಲು ಪ್ರತಿ ತಿಂಗಳು ₹1.5 ಕೋಟಿಯಷ್ಟು ಹಣ ಹುಂಡಿಗಳಲ್ಲಿ ಸಂಗ್ರಹವಾಗುತ್ತಿತ್ತು.
ಜೂನ್ 26ರಂದು ನಡೆದ ಬಳಿಕ, ಶುಕ್ರವಾರಸಾಲೂರು ಮಠಾಧ್ಯಕ್ಷರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಬಸ್ ನಿಲ್ದಾಣದಲ್ಲಿರುವ ವಾಣೀಜ್ಯ ಸಂಕೀರ್ಣದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.
ನೋಟುಗಳ ರೂಪದಲ್ಲಿ ₹1,40,60,447 ಕಾಣಿಕೆ ಬಂದಿದ್ದರೆ, ನಾಣ್ಯದ ರೂಪದಲ್ಲಿ ₹6,53,901 ಸಂಗ್ರಹವಾಗಿದೆ. ಭಕ್ತರು 17 ಗ್ರಾಂ ಚಿನ್ನ, 985 ಗ್ರಾಂ ಬೆಳ್ಳಿ ವಸ್ತುಗಳನ್ನೂ ಹುಂಡಿಗಳಿಗೆ ಕಾಣಿಕೆ ಹಾಕಿದ್ದಾರೆ.
ಸ್ಥಳದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಉಪಕಾರ್ಯದರ್ಶಿ ಬಸವರಾಜು, ಸಿಬ್ಬಂದಿ ಇದ್ದರು.