ಸ್ವಲ್ಪ ದಿನಗಳವರೆಗೆ ಜ್ಯೋತಿಯನ್ನು ಮುತ್ತುರಾಜು ಚೆನ್ನಾಗಿ ನೋಡಿಕೊಂಡಿದ್ದ. ಆಕೆ ಗರ್ಭಣಿಯೂ ಆಗಿದ್ದಳು. ಆದರೆ, ನಂತರ ಜ್ಯೋತಿಯೊಂದಿಗೆ ಜಗಳವಾಡಲು ಆರಂಭಿಸಿದ್ದ. ‘ನಾನು ಗೊಲ್ಲ ಜನಾಂಗದವನು. ನೀನು ಕೀಳು ಜಾತಿಗೆ ಸೇರಿದ ಸೋಲಿಗಳಾಗಿದ್ದು, ನಿನ್ನನ್ನು ಪ್ರೀತಿಸಿ ಮದುವೆಯಾಗಿ ನಮ್ಮ ಮನೆಯವರನ್ನೆಲ್ಲ ದೂರ ಮಾಡಿಕೊಂಡು ದೊಡ್ಡ ತಪ್ಪು ಮಾಡಿದೆ. ಈಗಲೂ ನಿನ್ನನ್ನುಯಾರಿಗೂ ತಿಳಿಯದ ಹಾಗೆ ಕೊಲೆ ಮಾಡಿ ನಮ್ಮ ಜಾತಿಯ ಹುಡುಗಿಯನ್ನು ಮದುವೆ ಮಾಡಿಕೊಳ್ಳುತ್ತೇನೆ’ ಎಂದು ಹೇಳಿ ಮಾನಸಿಕ ಕಿರುಕುಳ ನೀಡಿದ್ದ.