ಮಹಾದೇವ ಅವರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ವನ್ಯಧಾಮದ ಒಳಗಡೆ ಇರುವ ಶನೇಶ್ವರ ದೇವಾಲಯಕ್ಕೆ ಸಂಜೆ 5.30ರ ಸುಮಾರಿಗೆ ತೆರಳುತ್ತಿದ್ದ ಸಂದರ್ಭದಲ್ಲಿಎರಕೆಯಂ ಹಳ್ಳದ ಬಳಿ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಇಬ್ಬರು ಸ್ನೇಹಿತರು ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮಹಾದೇವ ಸ್ಥಳದಲ್ಲೇ ಮೃತಪಟ್ಟಿದ್ದಾರೆ.