ಹಣ್ಣುಗಳ ಮಾರುಕಟ್ಟೆಯಲ್ಲಿ ಮೂಸಂಬಿ ಹಾಗೂ ದ್ರಾಕ್ಷಿ₹ 10 ಕಡಿಮೆಯಾಗಿದೆ. ಉಳಿದ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.
‘ಮಂಗಳವಾರದ ಬಳಿಕ ತರಕಾರಿ ದರ ಜಾಸ್ತಿಯಾಗುವ ನಿರೀಕ್ಷೆ ಇದೆ. ಈಗ ತಾನೆ ಮದುವೆ, ಗೃಹಪ್ರವೇಶಗಳು ಆರಂಭಗೊಂಡಿವೆ. ಎಪಿಎಂಸಿಗೆ ತರಕಾರಿಗಳು ಬರುವ ಪ್ರಮಾಣಕ್ಕೆ ಅನುಗುಣವಾಗಿ ವ್ಯಾಪಾರ ನಡೆಯುತ್ತದೆ’ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ಹೇಳುತ್ತಾರೆ.
ಈ ವಾರ ಹೂವುಗಳ ಬೆಲೆಯಲ್ಲೂ ಏರಿಳಿತ ಕಂಡು ಬಂದಿದೆ. ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಸುಗಂಧರಾಜ₹ 80, ಕಾಕಡ ಕೆಜಿಗೆ ₹ 100 ಹೆಚ್ಚಳವಾಗಿದೆ. ಗುಲಾಬಿ (100ಕ್ಕೆ) ₹ 100 ಜಾಸ್ತಿಯಾಗಿದೆ. ಸೇವಂತಿಗೆ ಕೆಜಿಗೆ ₹ 10, ಸುಗಂಧರಾಜ ಹಾರ (1ಕ್ಕೆ) ₹ 50 ಹೆಚ್ಚಳವಾಗಿದೆ.
‘ಸಂಕ್ರಾಂತಿ ಬಳಿಕ ಶುಭ ಸಮಾರಂಭ, ಗೃಹಪ್ರವೇಶ ಮುಂತಾದ ಶುಭ ಕಾರ್ಯಕ್ರಮಗಳು ನಡೆಯುತ್ತಿವೆ. ಹಾಗಾಗಿ, ಹೂವುಗಳಿಗೆ ಬೇಡಿಕೆ ಇದೆ’ ಎಂದು ಬಿಡಿ ಹೂವುಗಳ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.
ಮೊಟ್ಟೆ ಧಾರಣೆ ಇಳಿಕೆ:ಮಾಂಸ ಮಾರುಕಟ್ಟೆಯಲ್ಲಿ ಮೂರು ವಾರಗಳಿಂದ ಮೊಟ್ಟೆ ಧಾರಣೆ ಇಳಿಕೆಕಾಣುತ್ತಿದೆ.
ಕಳೆದ ವಾರ₹ 425 ಇದ್ದ ಮೊಟ್ಟೆ ಬೆಲೆ (100ಕ್ಕೆ) ಈ ವಾರ₹ 400ರ ವರೆಗೆ ಇದೆ.ಚಿಕನ್, ಮಟನ್, ಮೀನುಗಳ ಬೆಲೆಯಥಾಸ್ಥಿತಿ ಮುಂದುವರಿದಿದೆ.