ಚಾಮರಾಜನಗರ:ಹೂವುಗಳ ಧಾರಣೆ ಈ ವಾರ ಕೊಂಚ ಇಳಿಕೆ ಕಂಡಿದೆ. ಪಾನೀಯ ತಯಾರಿಕೆಯಹಣ್ಣುಗಳಿಗೆ ಬೇಡಿಕೆ ಶುರುವಾಗಿದೆ. ಕೆಲ ತರಕಾರಿಗಳ ಬೆಲೆ ಏರಿಳಿತವಾಗಿದೆ. ಮೊಟ್ಟೆ ದರ ಕಡಿಮೆಯಾಗಿದ್ದು ಮಾಂಸದ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿಲ್ಲ ಯಥಾಸ್ಥಿತಿ ಮುಂದುವರಿದಿದೆ.
ಕಳೆದ ವಾರ ಶಿವರಾತ್ರಿ ವೇಳೆ ಏರಿಕೆ ಕಂಡಿದ್ದ ಹೂವುಗಳ ಬೆಲೆಯಲ್ಲಿ ಈ ವಾರ ಕೊಂಚ ಇಳಿಕೆ ಕಂಡಿದೆ. ಮಲ್ಲಿಗೆ ಈ ವಾರ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಚೆಂಡು ಹೂವು, ಗುಲಾಬಿ, ಸೇವಂತಿ ಬಿಟ್ಟು ಉಳಿದೆಲ್ಲ ಹೂವುಗಳು ಅಗ್ಗವಾಗಿದೆ.ಕನಕಾಂಬರ₹200, ಸುಗಂಧರಾಜ₹60, ಸುಗಂಧರಾಜ ಹಾರ₹100, ಕಾಕಡ₹80 ಇಳಿಕೆಯಾಗಿದೆ.
‘ಕಳೆದೆರಡು ದಿನದಿಂದ ಮಲ್ಲಿಗೆ ಹೂವು ಮಾರುಕಟ್ಟೆಗೆ ಆವಕವಾಗುತ್ತಿದೆ. ಶಿವರಾತ್ರಿ ಹಾಗೂ ಜಾತ್ರಾ ಸಂದರ್ಭದಲ್ಲಿ ಹೂವುಗಳಿಗೆ ಬೇಡಿಕೆ ಇತ್ತು. ಈ ವಾರ ಅನೇಕ ಹೂವುಗಳು ಅಗ್ಗವಾಗಿದೆ. ಸೋಮವಾರ, ಶುಕ್ರವಾರದ ಹಿಂದಿನ ದಿನಗಳಂದುಬೇಡಿಕೆ ಇರಲಿದೆ. ಮುಂದಿನ ಯುಗಾದಿಗೆಬೆಲೆ ಏರಿಕೆಕೆಯ ನಿರೀಕ್ಷೆಯಲ್ಲಿದ್ದೇವೆ’ ಎಂದು ಬಿಡಿ ಹೂವುಗಳ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ಹೇಳಿದರು.
ಕಳೆದ ವಾರ ದ್ರಾಕ್ಷಿ₹100 ಇತ್ತು ಈ ವಾರ₹20 ಹೆಚ್ಚಾಗಿದೆ. ಉಳಿದಂತೆ ಕಲ್ಲಂಗಡಿ, ಮೂಸಂಬಿ, ಕಿತ್ತಲೆ, ಸಪೋಟಾ ಹಣ್ಣುಗಳಿಗೆ ಬೇಡಿಕೆ ಇದೆ ಆದರೆ, ಬೆಲೆ ಏರಿಕೆಯಾಗಿಲ್ಲ. ಏಲಕ್ಕಿ ಬಾಳೆ, ಪಚ್ಚಬಾಳೆ₹5 ಹೆಚ್ಚಳವಾಗಿದೆ.
‘ಬೇಸಿಗೆ ಆರಂಭವಾಗದಿದ್ದರೂ ಬಿಸಿಲಿನ ತಾಪಕ್ಕೆಹಣ್ಣುಗಳಿಗೆ ಕೊಂಚ ಬೇಡಿಕೆ ಶುರುವಾಗಿದೆ. ದ್ರಾಕ್ಷಿ, ಕಲ್ಲಂಗಡಿ ಅಂತಹ ರಸಭರಿತ ಹಣ್ಣುಗಳು ಸೇರಿದಂತೆ ಪಾನೀಯ ತಯಾರಿಸುವ ಹಣ್ಣುಗಳನ್ನು ಜನರು ಹೆಚ್ಚು ಖರೀದಿಸುತ್ತಿದ್ದಾರೆ’ಎನ್ನುತ್ತಾರೆಹಣ್ಣುಗಳ ವ್ಯಾಪಾರಿಗಳು.
ತರಕಾರಿಗಳ ಪೈಕಿ ಆಲೂಗೆಡ್ಡೆ, ಹಸಿಮೆಣಸಿನಕಾಯಿ, ಹೀರೆಕಾಯಿ, ತೆಂಗಿನ ಕಾಯಿ ₹5,ಈರುಳ್ಳಿ₹10 ಏರಿಕೆಯಾಗಿದೆ. ಶುಂಠಿ₹10, ಬೆಳ್ಳುಳ್ಳಿ₹40 ಇಳಿಕೆಯಾಗಿದೆ. ಉಳಿದಂತೆ ಬಹುತೇಕ ತರಕಾರಿಗಳ ಬೆಲೆ ಈ ವಾರ ಏರಿಳಿತ ಕಂಡಿದೆ.
ಮಾಂಸ ಮಾರುಕಟ್ಟೆಯಲ್ಲಿಪ್ರತಿ ಮೂರು ದಿನಗಳಿಗೆ ಬದಲಾಗುವ ಮೊಟ್ಟೆಯಬೆಲೆ ಕಳೆದ ವಾರ₹ 425 ಇತ್ತು. ಈ ವಾರ₹375 ಆಗಿದೆ.₹50 ಕಡಿಮೆಯಾಗಿದೆ. ಉಳಿದಂತೆ ಎಲ್ಲ ಮಾಂಸಗಳ ಬೆಲೆ ಯಥಾಸ್ಥಿತಿ ಮುಂದುವರಿದಿದೆ.