ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೋರಾಟ ಮಾಡುತ್ತಿರುವವರು ರೈತರಲ್ಲ. ಪಂಜಾಬ್, ಹರಿಯಾಣಗಳ ಎಪಿಎಂಸಿಯ ಮಧ್ಯವರ್ತಿಗಳು. ಎಪಿಎಂಸಿಯಲ್ಲಿ ರೈತರ ಉತ್ಪನ್ನಗಳಿಂದ ಅವರಿಗೆ ಕಮಿಷನ್ ಹೋಗುತ್ತಿತ್ತು. ಸರ್ಕಾರ ಎಪಿಎಂಸಿ ಕಾಯ್ದೆ ಜಾರಿಗೆ ತಂದ ನಂತರ ರೈತರೇ ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡಲು ಆರಂಭಿಸಿದರು. ಮಧ್ಯವರ್ತಿಗಳ ಲಾಬಿ ಪ್ರತಿಭಟನೆಯ ಹಿಂದೆ ಇದೆ’ ಎಂದರು.