‘ಶಿಬಿರದಲ್ಲಿದ್ದ ಭಾಸ್ಕರ ಎಂಬ ಆನೆ ಮೂರು ದಿನಗಳ ಹಿಂದೆ ಕಾಡಾನೆಗಳೊಂದಿಗೆ ಹೋಗಿತ್ತು. ಅದಕ್ಕಾಗಿ ಹುಡುಕಾಟ ನಡೆಸಿದ್ದೆವು. ನಾಗರಹೊಳೆಯಲ್ಲಿ ಪತ್ತೆಯಾಗಿದ್ದು, ಹಿಡಿಯಲಾಗಿದೆ. ಸದ್ಯ, ನಾಗರಹೊಳೆಯ ಅಂತರ ಸಂತೆಯಲ್ಲಿದ್ದು, ಮಂಗಳವಾರ ಶಿಬಿರಕ್ಕೆ ಕರೆತರಲಾಗುವುದು’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.