ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರಸ್ವಾಮಿ ದೇವಾಲಯದದೇವಾಲಯದ ಪಟ್ಟದ ಆನೆ, 45 ವರ್ಷದ ‘ಉಮಾ’ಳ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ.
ಆನೆಗೆ ಎರಡು ದಿನಗಳಿಂದ ಭೇದಿಯಾಗುತ್ತಿದ್ದು, ಸ್ಥಳೀಯ ಪಶು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಎರಡು ದಿನಗಳ ಬಳಿಕ ಚೇತರಿಕೆ ಕಂಡು ಬಂದಿದ್ದರೂ ಭಾನುವಾರ ಮತ್ತೆ ಬೇಧಿಯಾಗಿದೆ. ಹಾಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ನಾಗರಹೊಳೆಯಿಂದ ನುರಿತ ಪಶುವೈದ್ಯರನ್ನು ಕರೆಸಲಾಗುತ್ತಿದೆ.
‘ಅರಣ್ಯ ಇಲಾಖೆಯ ಸೂಚನೆ ಹಾಗೂ ತಿಳಿಸಿರುವ ಪಥ್ಯದಂತೆ ದಿನನಿತ್ಯ ಆಹಾರ ನೀಡಲಾಗುತ್ತಿದೆ. ಪ್ರಾಧಿಕಾರದಿಂದಲೂ ಶುಶ್ರೂಷೆ ನೀಡಲಾಗುತ್ತಿದೆ. ಭೇದಿ ಕಡಿಮೆಯಾಗದಿರುವುದರಿಂದನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನುರಿತ ವೈದ್ಯರನ್ನು ಕರೆಸಲಾಗುತ್ತಿದೆ. ಅವರ ಸಲಹೆಯಂತೆ ಚಿಕಿತ್ಸೆ ನೀಡಲಾಗುವುದು’ ಎಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಹೇಳಿದ್ದಾರೆ.