ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ವೈರಸ್ ತಡೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳಿಗಾಗಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಸಂಸದರ ನಿಧಿಯಿಂದ ₹1 ಕೋಟಿ ಅನುದಾನ ನೀಡಿದ್ದಾರೆ.
ಅನುದಾನ ಬಿಡುಗಡೆಗೆ ಸಮ್ಮತಿಸಿದ ಪತ್ರವನ್ನು ನವೆದೆಹಲಿಯ ಸಂಸದರ ನಿಧಿ ಕುರಿತ ಸಮಿತಿಯ ಮುಖ್ಯಸ್ಥರಿಗೆ ಅವರು ಕಳುಹಿಸಿದ್ದಾರೆ.
ಜೊತೆಗೆ ಅವರು ತಮ್ಮ ಒಂದು ತಿಂಗಳ ವೇತನ ₹1 ಲಕ್ಷವನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ನೀಡಿದ್ದಾರೆ.