ಹುಲಿಗಳ ಸ್ಥಳಾಂತರ ಮಾಡಿ: ಸ್ಥಳೀಯ ಶಾಸಕ ಆರ್.ನರೇಂದ್ರ ಅವರು ಕೂಡ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ‘10–12 ಹುಲಿಗಳಿಗಾಗಿ ಅರಣ್ಯ ವ್ಯಾಪ್ತಿಯಲ್ಲಿರುವ 15 ಸಾವಿರ ಜನರಿಗೆ, ಮಹದೇಶ್ವರ ಸ್ವಾಮಿಯ ಲಕ್ಷಾಂತರ ಭಕ್ತರಿಗೆ ತೊಂದರೆ ಕೊಡುವುದು. ಆ 12 ಹುಲಿಗಳನ್ನು ಸೆರೆ ಹಿಡಿದು ಜಿಲ್ಲೆಯಲ್ಲೇ ಇರುವ ಬಂಡೀಪುರ ಹಾಗೂ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಬಿಡಬಹುದಲ್ಲವೇ’ ಎಂದು ಹೇಳಿದ್ದಾರೆ.