‘ಗ್ರೀನ್ ಆಸ್ಕರ್’ ಪ್ರಶಸ್ತಿ ಪುರಸ್ಕೃತ ಕೃಪಾಕರ ಸೇನಾನಿ ಅವರು ಕಾಡಿನ ಸಂರಕ್ಷಣೆಗಾಗಿ ಬಂಡೀಪುರದಲ್ಲಿ ಸ್ಥಾಪಿಸಿರುವ ‘ನಮ್ಮ ಸಂಘ’ದಲ್ಲಿ 17 ವರ್ಷ ಕೆಲಸ ಮಾಡಿದ್ದರು. ಕಾಡಂಚಿನ 200 ಹಳ್ಳಿಗಳ 40 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಲು ಶ್ರಮಿಸಿದ್ದರು. ಈ ಸಾಧನೆಗಾಗಿ ‘ಏಷ್ಯಾ ಸ್ಯಾಂಚುರಿ’ ನೀಡುವ ಪರಿಸರ ಸಂರಕ್ಷಣಾ ಪ್ರಶಸ್ತಿಗೆ ಭಾಜನರಾಗಿದ್ದರು. ಹಿಂದೆ, ಕೇಂದ್ರದಲ್ಲಿ ಪರಿಸರ ಮತ್ತು ಅರಣ್ಯ ಖಾತೆ ಸಚಿವರಾಗಿದ್ದ ಜೈರಾಮ್ ರಮೇಶ್ ಅವರ ಮೆಚ್ಚುಗೆಗೂ ಪಾತ್ರರಾಗಿದ್ದ ಸುರೇಶ್, ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಂಸ್ಥೆಯ ಮೂಲಕ ನೆರವಾಗಿದ್ದರು.