‘ಮಳೆ, ಗಾಳಿ, ಚಳಿಗೆ ಜ್ವರ, ಕೆಮ್ಮು ಸಾಮಾನ್ಯ. ವೈದ್ಯರ ಬಳಿಗೆ ಹೋದರೆ ನೂರಾರು ರೂಪಾಯಿ ಖರ್ಚು ಮಾಡಬೇಕು. ನೇರವಾಗಿ ಮಾತ್ರೆ ಖರೀದಿಸಿ ಸೇವಿಸಿದರೆ ಗುಣವಾಗುತ್ತಿತ್ತು. ಆದರೆ, ಈಗ ಆಸ್ಪತ್ರೆಗೆ ಹೋದರೆ ವಿವಿಧ ಪ್ರಶ್ನೆ ಕೇಳುತ್ತಾರೆ. ವಿಳಾಸ, ಮೊಬೈಲ್ ನಂಬರ್ ಕೇಳುತ್ತಾರೆ. ನಮ್ಮನ್ನೂ ಕೋವಿಡ್–19 ಸೋಂಕಿತರಂತೆ ನೋಡುತ್ತಾರೆ. ಮೊದಲಿನಂತೆ ಚಿಕಿತ್ಸೆಯೂ ದೊರಕುವುದಿಲ್ಲ’ ಎಂಬುದು ಅವರ ಬೇಸರ.