ಘಟನೆ ವಿವರ:ಬೆಂಗಳೂರಿನಲ್ಲಿ ಕಾನ್ಸ್ಟೆಬಲ್ ಆಗಿ ಕೆಲಸ ಮಾಡುತ್ತಿರುವ ವೆಂಕಟೇಶ್ ಅವರು ತಾಲ್ಲೂಕಿನ ಧನಗೆರೆ ಗ್ರಾಮದ ಸಾವಿತ್ರಮ್ಮ ಎಂಬುವವರ ಮಗಳು ದಿವ್ಯಾ ಅವರನ್ನು 2017ರ ಫೆಬ್ರುವರಿ 2ರಂದು ವಿವಾಹವಾಗಿದ್ದರು. ಮದುವೆಗೂ ಮುನ್ನಾ ಹುಡುಗಿಗೆ ಮಾಂಗಲ್ಯ ಸರ, ಹುಡುಗನಿಗೆ ಚಿನ್ನದ ಉಂಗುರ, ₹2.5 ಲಕ್ಷ ನಗದು ಹಣವನ್ನು ವರದಕ್ಷಿಣೆಯಾಗಿ ಕೊಡಲು ಒಪ್ಪಂದವಾಗಿತ್ತು. ಮದುವೆಗೆ ಮೊದಲೇ ₹2 ಲಕ್ಷ ಹಣವನ್ನು ವಧುವಿನ ಮನೆಯವರು ನೀಡಿದ್ದರು. ಚಿನ್ನದ ಮಾಂಗಲ್ಯ ಸರ ಹಾಗೂ ₹50 ಸಾವಿರ ನಗದು ಬಾಕಿ ಉಳಿಸಿಕೊಂಡಿದ್ದರು.