ಚಾಮರಾಜನಗರ:ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಅವರು ಕಾಂಗ್ರೆಸ್ ಅಭ್ಯರ್ಥಿ ಆರ್. ದೃವನಾರಾಯಣ ಅವರನ್ನು ಹಿಂದಿಕ್ಕಿ ಅಲ್ಪ ಮಂತದ ಅಂತರದ ಗೆಲವು ಸಾಧಿಸಿದರು.
ಶ್ರೀನಿವಾಸ್ ಪ್ರಸಾದ್ ಅವರು 1,500 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.
ಶ್ರೀನಿವಾಸ ಪ್ರಸಾದ್ ಗೆಲುವಿಗೆ ಬೆಂಬಲಿಗರು ಘೋಷಣೆ ಕೂಗಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.
ಬೆಳಿಗ್ಗೆಯಿಂದಲು ನಡೆದ ಹಲವು ಸುತ್ತುಗಳಲ್ಲಿ ಎಣಿಕೆಯಲ್ಲಿ ದೃವನಾರಾಯಣ ಅವರು ಮುನ್ನಡೆ ಕಾಯ್ದುಕೊಂಡಿದ್ದರು. ಕೊನೆಯ ಸುತ್ತುಗಳಲ್ಲಿ ಶ್ರೀನಿವಾಸ್ ಪ್ರಸಾದ್ ಅವರು ಮುನ್ನಡೆ ಸಾಧಿಸುತ್ತಾ ಬಂದು ಗೆಲವು ಪಡೆದರು.
ಶ್ರೀನಿವಾಸ ಪ್ರಸಾದ್ ಪಡೆದ ಮತ: 5,67,010
ದೃವನಾರಾಯಣ ಪಡೆದ ಮತ: 5,65,754
(ಸಂಜೆ 6.30ಕ್ಕೆ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಿಸಿರುವಂತೆ)