49 ವ್ಯಕ್ತಿಗಳು ನಿಗಾದಲ್ಲಿ: ಈ ಮಧ್ಯೆ, ನಂಜನಗೂಡಿನ ಔಷಧಿ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲೆಯ 49 (ನೆಗೆಟಿವ್ ಬಂದ ವ್ಯಕ್ತಿಯೂ ಸೇರಿ) ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಇವರನ್ನು ಅಂಬೇಡ್ಕರ್ ಭವನದಲ್ಲಿ ಸ್ಥಾಪಿಸಲಾಗಿರುವ ವಿಶೇಷ ನಿಗಾ ಘಟಕದಲ್ಲಿ ಇರಿಸಲಾಗಿದೆ. ಇವರಲ್ಲದೇ ವಿದೇಶದಿಂದ ಬಂದಿರುವ ನಾಲ್ವರೂ ಈ ಘಟಕದಲ್ಲಿದ್ದಾರೆ. ವಿದೇಶದಿಂದ ಬಂದವರ ಪೈಕಿ 38 ಮಂದಿ 14 ದಿನಗಳ ಪ್ರತ್ಯೇಕ ವಾಸದ ಅವಧಿ ಪೂರ್ಣಗೊಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.