‘ಕಾಳು ಕಟ್ಟುವಿಕೆ ಹಂತ ಮುಟ್ಟಿರುವ ಭತ್ತ ಮತ್ತು ತೋಟಗಾರಿಕಾ ಬೆಳೆಗಳಿಗೆ ಮಳೆಯಿಂದ ಅನುಕೂಲವಾಗಲಿದೆ. ಅರಿಸಿನ, ಈರುಳ್ಳಿ ಮೊಳಕೆ ಒಡೆದಿವೆ. ತೆಂಗು ಮತ್ತು ಅಡಿಕೆ ನಾಟಿ ಮಾಡುವ ಕೃಷಿಕರಿಗೆ ಈ ಮಳೆ ವರ. ಆದರೆ, ಉದ್ದು, ಹೆಸರು ಬೆಳೆಗಾರರು ತೇವಾಂಶ ಹೆಚ್ಚಾಗದಂತೆ ಎಚ್ಚರ ವಹಿಸಬೇಕು’ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಅವರು ‘ಪ್ರಜಾವಾಣಿ’ಗೆ ಹೇಳಿದರು.