ರೈತರಿಗೆ ಉತ್ತಮ ಬೆಲೆ: ಜಿಲ್ಲೆಯಲ್ಲಿ ಈ ಸಮಯದಲ್ಲಿ ಟೊಮೆಟೊ ಬೆಳೆಯುವವರ ಸಂಖ್ಯೆ ಕಡಿಮೆ. ಈರುಳ್ಳಿ, ಅರಿಸಿನ, ಸೂರ್ಯಕಾಂತಿ ಬೆಳೆಯುತ್ತಾರೆ. ಕೆಲವು ರೈತರು ಈಗ ಗಿಡ ನಾಟಿ ಮಾಡಿದ್ದು, ಪೈರು ಬಂದು, ಹೂ, ಹೀಚು ಕಾಯಿ ಬಿಟ್ಟಿದೆ. ಕೆಲವು ರೈತರ ಜಮೀನುಗಳಲ್ಲಿ ಮಾತ್ರ ಟೊಮೆಟೊ ಸಿಗುತ್ತದೆ. ಮಳೆಯೂ ಆಗುತ್ತಿರುವುದರಿಂದ ಟೊಮೆಟೊ ಬೆಳೆ ಹಾನಿಗೀಡಾಗುತ್ತಿದ್ದು, ಉತ್ಪಾದನೆ ಕಡಿಮೆಯಾಗಿದೆ.