ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಮಾತನಾಡಿ ‘ಚಾಮರಾಜನಗರದಲ್ಲಿ ಸಂಚಾರ ಪೊಲೀಸರು, ಕೂಲಿ ಮಾಡುವವರು, ರೈತರ ದ್ವಿಚಕ್ರವಾಹನಗಳನ್ನು ಗುರಿಯಾಗಿಸಿಕೊಂಡು ವಾಹನಗಳನ್ನು ತಡೆದು ದಂಡ ವಸೂಲಿ ಮಾಡುತ್ತಿದ್ದಾರೆ. ಸಾರ್ವಜನಿಕರು ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲಿ ತೊಂದರೆ ಕೊಡಬೇಡಿ ಎಂದು ಸಂಘದ ಜಿಲ್ಲಾ ಅಧ್ಯಕ್ಷರು ಹೇಳಿದ್ದಕ್ಕೆ ಸಂಚಾರ ಠಾಣೆಯ ಎಎಸ್ಐ ರೇವಣ್ಣಸ್ವಾಮಿ ಏಕ ವಚನದಲ್ಲಿ, ‘ನೀವು ರೋಲ್ಕಾಲ್ ಮಾಡುತ್ತೀರಿ’ ಎಂದಿದ್ದಾರೆ.ನಮ್ಮ ಮೇಲೆ ಆರೋಪ ಮಾಡಿರುವುದನ್ನು ಸಾಬೀತುಪಡಿಸಬೇಕು. ಅಲ್ಲಿಯ ತನಕ ಹೋರಾಟ ಕೈ ಬಿಡುವುದಿಲ್ಲ’ ಎಂದರು.