ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ನಿಮ್ಮ ಇಷ್ಟ ಬಂದ ಹಾಗೆ ತೀರ್ಮಾನ ತೆಗೆದುಕೊಂಡು, ಜನತಾದಳದ ಕಾರ್ಯಕರ್ತರು, ನಾಯಕರು ಹಾಗೂ ಹುಣಸೂರು ಮತದಾರರನ್ನು ಮುಂಬೈಗೆ ಹೋಗಿ ಮಾರಾಟ ಮಾಡಿ ಬಂದು ಇವತ್ತು ಯಾಕೆ ಯಡಿಯೂರಪ್ಪ ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತೀರಿ?ಹುಣಸೂರು ಅಭ್ಯರ್ಥಿ ಆಗಬೇಡ ಎಂದು ಅವರು ಹೇಳಿರಲಿಲ್ಲವೇ? ಈಗ ಮಾಡಿದ್ದುಣ್ಣೋ ಮಹರಾಯ’ ಎಂದು ವಿಶ್ವನಾಥ್ ಹೆಸರು ಹೇಳದೆಯೇ ವ್ಯಂಗ್ಯವಾಡಿದರು.