‘ಕಂಪ್ಯೂಟರ್, ಪ್ರೊಜೆಕ್ಟರ್, ಸ್ಕ್ರೀನ್ ಪ್ರಿಂಟರ್ಗಳನ್ನು ಬಳಸಿ ಬೋಧನೆ ಮಾಡಿ ಕಲಿಕೆ ಸುಲಭಗೊಳಿಸಲಾಗುತ್ತದೆ. ಶೌಚಾಲಯ, ಗ್ರಂಥಾಲಯ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಇದೆ. ಶಾಲಾಭಿವೃದ್ದಿ ಹಾಗೂ ಶಾಲಾ ಮಂತ್ರಿಮಂಡಲ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ತಿಂಗಳಿಗೊಮ್ಮೆ ಓಂಕಾರ ವಾಣಿ ಎಂಬ ಮಾಸ ಪತ್ರಿಕೆಯನ್ನು ವಿದ್ಯಾರ್ಥಿಗಳು ಹೊರ ತರುತ್ತಾರೆ’ ಎಂದು ಶಿಕ್ಷಕ ಮಹದೇವಸ್ವಾಮಿ ಅವರು ತಿಳಿಸಿದರು.