ಮಹದೇಶ್ವರ ಬೆಟ್ಟ: ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಸೋಮವಾರಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪತ್ನಿ ಪ್ರೇಮ, ಪುತ್ರಿ ಶಾಂಭವಿ ಹಾಗೂ ಕುಟುಂಬ ವರ್ಗದವರೊಂದಿಗೆ ಮದ್ಯಾಹ್ನ 12.30ರ ವೇಳೆಗೆ ಬೆಟ್ಟಕ್ಕೆ ಬಂದ ಅವರು ಮನೆ ದೇವರು ಮಾದಪ್ಪನ ದರ್ಶನ ಪಡೆದು, ಪೂಜೆ ಸಲ್ಲಿಸಿದರು.
ನಂತರ ಬೆಟ್ಟದಲ್ಲಿರುವ ರಾಷ್ಟ್ರಪತಿ ಭವನಕ್ಕೆ ತೆರಳಿ ಊಟ ಮಾಡಿ, ಬೆಂಗಳೂರಿಗೆ ತೆರಳಿದರು.
ಭೇಟಿ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಲು ಎಸ್.ಎಂ.ಕೃಷ್ಣ ಅವರು ನಿರಾಕರಿಸಿದರು.