ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಶಾಲಾ ಆರಂಭಕ್ಕೂ ಮುನ್ನ ಪಠ್ಯ ಪುಸ್ತಕ

ಶೇ 75ರಷ್ಟು ಪುಸ್ತಕ ಸರಬರಾಜು, ಐದು ಬ್ಲಾಕ್‌ಗಳಲ್ಲೂ ಮಕ್ಕಳಿಗೆ ವಿತರಣೆ
Last Updated 5 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ/ಯಳಂದೂರು: ಕೋವಿಡ್‌–19 ಕಾರಣದಿಂದ ಶಾಲೆ ಆರಂಭದ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಕೈಗೊಳ್ಳದೇ ಇದ್ದರೂ, ಮಕ್ಕಳಿಗೆ 2020–21ನೇ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳ ವಿತರಣೆ ಆರಂಭವಾಗಿದೆ.

ಪ್ರತಿ ವರ್ಷ ಜೂನ್‌ ತಿಂಗಳಲ್ಲಿ ಶಾಲೆ ಆರಂಭವಾಗುವ ಹೊತ್ತಿಗೆ ಸಂಪೂರ್ಣವಾಗಿ ಪಠ್ಯಪುಸ್ತಕ ವಿತರಣೆ ಆಗುತ್ತಿರಲಿಲ್ಲ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿತ್ತು. ಶಿಕ್ಷಕರು ಕೂಡ ಪಠ್ಯಪುಸ್ತಕಗಳಿಗಾಗಿ ಕಚೇರಿಗಳಿಗೆ ಅಲೆಯಬೇಕಿತ್ತು. ಈ ಬಾರಿ, ಕೋವಿಡ್‌–19 ಭೀತಿಯಿಂದ ಶಾಲೆಗಳು ಇನ್ನೂಆರಂಭವಾಗಿಲ್ಲ. ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳನ್ನು ಪೂರೈಸುತ್ತಿದ್ದು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಮಕ್ಕಳ ಮನೆಗೆ ಪಠ್ಯಪುಸ್ತಕಗಳನ್ನು ತಲುಪಿಸುತ್ತಿದೆ.

ಜಿಲ್ಲೆಗೆ ಶೇ 75ರಷ್ಟು ಪಠ್ಯಪುಸ್ತಕಗಳು ಬಂದಿವೆ. ಎಲ್ಲ ಐದೂ ಶೈಕ್ಷಣಿಕ ವಲಯಗಳಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಟಿ.ಜವರೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಶೇ 99ರಷ್ಟು ವಿತರಣೆ: ಯಳಂದೂರು ತಾಲ್ಲೂಕು ಶೈಕ್ಷಣಿಕ ವಲಯದಲ್ಲಿ ಶೇ 99ರಷ್ಟು ಶಾಲೆಗಳಲ್ಲಿ ಪಠ್ಯಪುಸ್ತಕ ವಿತರಣೆ ಆಗಿದೆ.

ಶೈಕ್ಷಣಿಕ ವಲಯದಲ್ಲಿ 90ಕ್ಕೂ ಹೆಚ್ಚು ಪ್ರಾಥಮಿಕ ಮತ್ತುಪ್ರೌಢಶಾಲೆಗಳಿವೆ. 9,000 ಮಕ್ಕಳಿಗೆ ಪಠ್ಯ ಪೂರೈಸಲಾಗಿದೆ. ಶೇ 99ಶಾಲೆಗಳಿಗೆ ವಿತರಣೆ ಆಗಿದೆ. ಇವುಗಳಲ್ಲಿ ಉಚಿತ ಮತ್ತು ಮಾರಾಟ ಪುಸ್ತಕಗಳು ಸೇರಿವೆ. 96,267 ಉಚಿತ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿದ್ದು, 91,852 ಪಠ್ಯಪುಸ್ತಕಗಳು ಪೂರೈಕೆಯಾಗಿವೆ. 14,427 ಪಠ್ಯ ಪುಸ್ತಕಗಳನ್ನು ಖಾಸಗಿ ಶಾಲೆಗಳಿಗೆಹಂಚಿಕೆ ಮಾಡಲಾಗಿದೆ.

‘ಈಗಾಗಲೇ ಎಲ್ಲ ಶಾಲೆಗಳಿಗೂ ಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ. ಆಯಾ ಶಾಲೆಗಳಮುಖ್ಯಸ್ಥರು, ಶಿಕ್ಷಕರು ತಮ್ಮ ಬೇಡಿಕೆಗೆ ಅನುಸಾರವಾಗಿ ಪುಸ್ತಕಗಳನ್ನು ಶಾಲೆಗಳಿಗೆಕೊಂಡೊಯ್ದು ಹಂಚುತ್ತಿದ್ದಾರೆ. ಕೆಲವೆಡೆ ಶಿಕ್ಷಕರೇ ಮನೆಗಳಿಗೆ ತೆರಳಿ ಪಠ್ಯ ಪುಸ್ತಕ ತಲುಪಿಸಲು ಮುಂದಾಗಿದ್ದಾರೆ’ ಎಂದು ಶಿಕ್ಷಣ ಸಂಯೋಜಕಶಿವಾಲಂ‌‌ಕಾರ್ ಅವರು ‘ಪ್ರಜಾವಾಣಿ’ಗೆ‌ ತಿಳಿಸಿದರು.

ಮಕ್ಕಳ ಮೇಲೆ ನಿಗಾ:‘ವರ್ಕ್‌ ಫ್ರಂ ಹೋಮ್ ಕಾರ್ಯಕ್ರಮಗಳು ಮುಗಿಯಲಿದ್ದು, ಈಗ ಮಕ್ಕಳ ಕಲಿಕಾಚಟುವಟಿಕೆಗಳನ್ನು ಪರಿಶೀಲನೆಗೆ ಶಿಕ್ಷಕರೇ ಮನೆಗೆ ಭೇಟಿ ನೀಡುತ್ತಿದ್ದಾರೆ. ಮಕ್ಕಳಲ್ಲಿ ಸ್ವಯಂ ಕಲಿಕೆ ಪ್ರೇರೇಪಿಸಲು ಪಠ್ಯಪುಸ್ತಕ ಮತ್ತುಅಭ್ಯಾಸ ಪುಸ್ತಕಗಳನ್ನು ಮಕ್ಕಳ ಮನೆಗಳಿಗೆ ಪೂರೈಸಲಾಗುತ್ತದೆ. ಬದಲಾದಪರಿಸ್ಥಿತಿಯಲ್ಲಿ ಎಲ್ಲ ಗ್ರಾಮೀಣ ಮಕ್ಕಳು ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಹೆಚ್ಚಿನಅಭ್ಯಾಸ ಮಾಡಲಿದ್ದಾರೆ’ ಎಂದು ವಲಯ ಶಿಕ್ಷಣ ಅಧಿಕಾರಿ ವಿ. ತಿರುಮಲಾಚಾರಿ ಅವರು ಹೇಳಿದರು.

ಬೋಧಕರು, ಪೋಷಕರ ಸಂತಸ

ಶಾಲೆಗಳು ಆರಂಭಕ್ಕೂ ಮುನ್ನವೇ ಪಠ್ಯಪುಸ್ತಕ ಮಕ್ಕಳ ಕೈ ಸೇರಿರುವುದರಿಂದ ಪೋಷಕರು, ಶಿಕ್ಷಕರು ಸಂತಸಗೊಂಡಿದ್ದಾರೆ.

‘ಬೇಗ ಪಠ್ಯಪುಸ್ತಕಗಳು ಸಿಕ್ಕಿರುವುದು ಕಲಿಕೆಗೆಪೂರಕ ಆಗಲಿದೆ. ಮನೆಯಲ್ಲಿ ಓದಲು, ಕಲಿಯಲು ಹೆಚ್ಚಿನ ಸಮಯಾವಕಾಶ ಸಿಗಲಿದೆ. ನಂತರಶಿಕ್ಷಕರು ಅದೇ ವಿಷಯ ಬೋಧನೆ ಮಾಡುವುದರಿಂದ ಮತ್ತಷ್ಟು ಪರಿಪಕ್ವ ಕಲಿಕೆ ಉಂಟಾಗಲಿದೆ.ಶೈಕ್ಷಣಿಕ ಪ್ರಗತಿಗೂ ಇದು ಸಹಕಾರಿ’ ಎಂದು ಬಾಲಕಿಯರ ಸರ್ಕಾರಿ ಶಾಲೆಯ ಶಿಕ್ಷಕರವಿ ಮತ್ತು ಲಕ್ಷ್ಮಿ ಅವರು ಹೇಳಿದರು.

‘ಮಕ್ಕಳು ಶಾಲೆಯಿಂದ ಹೊರಗಿದ್ದು, ಏನು ಕಲಿಯುತ್ತಾರೆ ಎಂಬುದೇ ಯೋಚನೆ ಆಗಿತ್ತು.ಶಿಕ್ಷಣ ಇಲಾಖೆ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ವಿತರಣೆ ಮಾಡಿರುವುದರಿಂದನೆಮ್ಮದಿಯಾಗಿದೆ. ಪ್ರತಿದಿನ ದೂರದರ್ಶನ ಕಲಿಕೆ ಮತ್ತು ಶಿಕ್ಷಕರ ಕಣ್ಗಾವಲು
ಇರುವುದರಿಂದ ವಿದ್ಯಾರ್ಥಿಗಳು ಬರವಣಿಗೆ, ಓದು ಮತ್ತಿತರ ಸೃಜನಶೀಲಚಟುವಟಿಕೆಗಳಲ್ಲಿ ತೊಡಗಲು ಸಾಧ್ಯವಾಗಿದೆ’ ಎಂದು ಪೋಷಕರಾದ ಸಂತೇಮರಹಳ್ಳಿ ದಾಮೋದರಆಚಾರ್ಯ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT