ಚಾಮರಾಜನಗರ: ಕೋವಿಡ್–19 ನಿಯಂತ್ರಿಸುವ ಪ್ರಯತ್ನವಾಗಿ ರಾಜ್ಯದಾದ್ಯಂತ ಜಾರಿಯಲ್ಲಿರುವ ಭಾನುವಾರದ ಲಾಕ್ಡೌನ್ಗೆ ಜಿಲ್ಲೆಯಲ್ಲಿ ಈ ಭಾನುವಾರವೂ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಜಿಲ್ಲೆಯಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚಾಗುತ್ತಿರುವುದರ ನಡುವೆಯೇ, ಜನರಲ್ಲೂ ಹೆಚ್ಚು ಜಾಗೃತಿ ಮೂಡಿದ್ದು, ನಗರ, ಕೊಳ್ಳೇಗಾಲ ಸೇರಿ ಜಿಲ್ಲೆಯಾದ್ಯಂತ ಜನರ ಓಡಾಟ ವಿರಳವಾಗಿತ್ತು. ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಬಿಟ್ಟು ಉಳಿದವೆಲ್ಲ ಮುಚ್ಚಿದ್ದರಿಂದ ವ್ಯಾಪಾರ ವಹಿವಾಟು ಸ್ತಬ್ಧವಾಗಿತ್ತು.
ಕೆಎಸ್ಆರ್ಟಿಸಿ, ಖಾಸಗಿ ಬಸ್ಗಳು, ಆಟೊ ಟ್ಯಾಕ್ಸಿಗಳು ಕೂಡ ರಸ್ತೆಗೆ ಇಳಿಯಲಿಲ್ಲ. ಆಸ್ಪತ್ರೆ, ಔಷಧ ಅಂಗಡಿ, ದಿನಪತ್ರಿಕೆಗಳು, ಹಾಲು ಸೇರಿದಂತೆ ಅಗತ್ಯ ಸರಕುಗಳು ಲಭ್ಯವಿದ್ದವು. ಬಹುತೇಕ ಎಲ್ಲ ಹೋಟೆಲ್ಗಳು ಮುಚ್ಚಿದ್ದವು.
ಚಾಮರಾಜನಗರದಲ್ಲಿ ದ್ವಿಚಕ್ರ ವಾಹನಗಳಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರನ್ನು ಸಂಚಾರ ಪೊಲೀಸರು ತಡೆದು ವಿಚಾರಿಸುತ್ತಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಸುಮ್ಮನೆ ಕುಳಿತಿದ್ದ ಜನರಿಗೆ ಎಚ್ಚರಿಕೆ ನೀಡಿದಪೊಲೀಸರು ಮನೆಗೆ ಕಳುಹಿಸಿದರು.