‘ನದಿಯಿಂದ ದಿನಕ್ಕೆ ಕನಿಷ್ಠ 50 ಎತ್ತಿನ ಗಾಡಿಗಳಷ್ಟು ಮರಳನ್ನು ಸಂಗ್ರಹಿಸಲಾಗುತ್ತಿದೆ. ಪೊಲೀಸರು, ತಾಲ್ಲೂಕು ಆಡಳಿತದ ಗಮನಕ್ಕೆ ಬಂದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ. ನದಿ ತೀರದ ಗ್ರಾಮದವರಿಗೆ ಮರಳು ಸಿಕ್ಕುತ್ತಿಲ್ಲ; ಆದರೆ ನಗರ ಪ್ರದೇಶಕ್ಕೆ ಮಾತ್ರ ಮರಳು ಎಗ್ಗಿಲ್ಲದೆ ಹೋಗುತ್ತಿದೆ. ಕೇಳಿದರೆ, ‘ನಮ್ಮನ್ನು ತಡೆಯುವರು ಯಾರು ಇಲ್ಲ’ ಎಂದು ಸಬೂಬು ಹೇಳುತ್ತಾರೆ’ ಎಂದು ಗ್ರಾಮದ ನಂಜಪ್ಪ ದೂರಿದರು.