‘ಜಿಲ್ಲೆಯಲ್ಲೂ ದಸರಾ ಆಚರಿಸಲು ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ₹1 ಕೋಟಿ ಅನುದಾನ ನೀಡಿದ್ದರು. ಆ ಬಳಿಕ ಸರ್ಕಾರ ಪ್ರತಿ ವರ್ಷ ಅನುದಾನ ಕೊಡುತ್ತಾ ಬಂದಿದೆ. ಎರಡು ವರ್ಷ ಕೋವಿಡ್ ಕಾರಣಕ್ಕೆ ದಸರಾ ಆಚರಿಸಲಿಲ್ಲ. ಸರ್ಕಾರ ಈ ಬಾರಿ ₹1 ಕೋಟಿ ಅನುದಾನ ನೀಡಿದ್ದು, ಅದ್ದೂರಿಯಾಗಿ ಜಿಲ್ಲಾ ದಸರಾ ನಡೆಯಲಿದೆ’ ಎಂದರು.