<p>ಸಂತೇಮರಹಳ್ಳಿ: ಸಮೀಪದ ತೆಳ್ಳನೂರು ಗ್ರಾಮದಲ್ಲಿ ವೀರಶೈವ ಬಳಗದ ವತಿಯಿಂದ ಭಾನುವಾರ ಬಸವ ಜಯಂತಿ ಆಚರಿಸಲಾಯಿತು.</p>.<p>ಗ್ರಾಮದಲ್ಲಿರುವ ಬಸವೇಶ್ವರ ನಾಮಫಲಕಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಪುಷ್ಬಾರ್ಚನೆ ಮಾಡಿದರು.ಪಿಎಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ರವೀಶ್ ಮಾತನಾಡಿ, ‘ಬಸವಣ್ಣ ಈ ದೇಶದ ಮಹಾನ್ ಚೇತನ. ಅಸಮಾನತೆಯ ವಿರುದ್ಧ ಹೋರಾಡಿದ ಮಹಾನ್ ನಾಯಕ. 11ನೇ ಶತಮಾನದಲ್ಲಿ ಇವರು ನೀಡಿದ ವಚನಗಳು ಇಂದಿಗೂ ಪರಿಣಾಮ ಬೀರುತ್ತಿವೆ. ಹೀಗಾಗಿ ಇವರ ಆದರ್ಶಗಳನ್ನು ಇಂದಿನ ಜನತೆ ಮೈಗೂಡಿಸಿಕೊಳ್ಳಬೇಕು’ ಎಂದು ತಿಳಿಸಿದರು.</p>.<p>ಬಾಣಹಳ್ಳಿ ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ರೇವಣ್ಣಸ್ವಾಮಿ ಮಾತನಾಡಿ, ‘ವಿಶ್ವದಾದ್ಯಂತ ಬಸವಣ್ಣನವರ ತತ್ವಗಳು ಬಳಕೆಯಾಗುತ್ತಿದೆ. ಅವರನ್ನು ಜಾತಿಗೆ ಸೀಮಿತಗೊಳಿಸದೇ ಸಾಮಾಜಿಕ ನಾಯಕರನ್ನಾಗಿ ನೋಡಬೇಕು. ಜಾತಿ ವ್ಯವಸ್ಥೆ ವಿರುದ್ದ ಧ್ವನಿ ಎತ್ತಿ ಸಾಮಾಜಿಕ ಕ್ರಾಂತಿಗೆ ಕಾರಣರಾದ ಬಸವಣ್ಣನವರು ಆದರ್ಶವಾಗಬೇಕು’ ಎಂದು ತಿಳಿಸಿದರು.</p>.<p>ಪಟೇಲ್ ನಾಗರಾಜು, ಗೌಡ್ರು ರಾಜೇಂದ್ರಪ್ಪ, ಟಿ.ಎಂ. ಕುಮಾರ್, ರಮೇಶ್, ನಾಗ, ಸೋಮಣ್ಣ, ಅಶೋಕ್, ಟಿ.ಸಿ.ನಾಗೇಶ್, ಸುಗಂಧರಾಜು, ಲೋಕೇಶ್, ದೇವರಾಜು, ಮೂರ್ತಿ, ಗುರುಪಾದಸ್ವಾಮಿ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-37-356579153</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಂತೇಮರಹಳ್ಳಿ: ಸಮೀಪದ ತೆಳ್ಳನೂರು ಗ್ರಾಮದಲ್ಲಿ ವೀರಶೈವ ಬಳಗದ ವತಿಯಿಂದ ಭಾನುವಾರ ಬಸವ ಜಯಂತಿ ಆಚರಿಸಲಾಯಿತು.</p>.<p>ಗ್ರಾಮದಲ್ಲಿರುವ ಬಸವೇಶ್ವರ ನಾಮಫಲಕಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಪುಷ್ಬಾರ್ಚನೆ ಮಾಡಿದರು.ಪಿಎಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ರವೀಶ್ ಮಾತನಾಡಿ, ‘ಬಸವಣ್ಣ ಈ ದೇಶದ ಮಹಾನ್ ಚೇತನ. ಅಸಮಾನತೆಯ ವಿರುದ್ಧ ಹೋರಾಡಿದ ಮಹಾನ್ ನಾಯಕ. 11ನೇ ಶತಮಾನದಲ್ಲಿ ಇವರು ನೀಡಿದ ವಚನಗಳು ಇಂದಿಗೂ ಪರಿಣಾಮ ಬೀರುತ್ತಿವೆ. ಹೀಗಾಗಿ ಇವರ ಆದರ್ಶಗಳನ್ನು ಇಂದಿನ ಜನತೆ ಮೈಗೂಡಿಸಿಕೊಳ್ಳಬೇಕು’ ಎಂದು ತಿಳಿಸಿದರು.</p>.<p>ಬಾಣಹಳ್ಳಿ ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ರೇವಣ್ಣಸ್ವಾಮಿ ಮಾತನಾಡಿ, ‘ವಿಶ್ವದಾದ್ಯಂತ ಬಸವಣ್ಣನವರ ತತ್ವಗಳು ಬಳಕೆಯಾಗುತ್ತಿದೆ. ಅವರನ್ನು ಜಾತಿಗೆ ಸೀಮಿತಗೊಳಿಸದೇ ಸಾಮಾಜಿಕ ನಾಯಕರನ್ನಾಗಿ ನೋಡಬೇಕು. ಜಾತಿ ವ್ಯವಸ್ಥೆ ವಿರುದ್ದ ಧ್ವನಿ ಎತ್ತಿ ಸಾಮಾಜಿಕ ಕ್ರಾಂತಿಗೆ ಕಾರಣರಾದ ಬಸವಣ್ಣನವರು ಆದರ್ಶವಾಗಬೇಕು’ ಎಂದು ತಿಳಿಸಿದರು.</p>.<p>ಪಟೇಲ್ ನಾಗರಾಜು, ಗೌಡ್ರು ರಾಜೇಂದ್ರಪ್ಪ, ಟಿ.ಎಂ. ಕುಮಾರ್, ರಮೇಶ್, ನಾಗ, ಸೋಮಣ್ಣ, ಅಶೋಕ್, ಟಿ.ಸಿ.ನಾಗೇಶ್, ಸುಗಂಧರಾಜು, ಲೋಕೇಶ್, ದೇವರಾಜು, ಮೂರ್ತಿ, ಗುರುಪಾದಸ್ವಾಮಿ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-37-356579153</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>