ಈ ಬಗ್ಗೆ ಪ್ರತಿಕ್ರಿಯಿಸಿದ ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ‘ಕಾರಿಡಾರ್ನಲ್ಲಿ ವನ್ಯಪ್ರಾಣಿಗಳು ಓಡಾಡುವುದು ಸಹಜ. ಇದುವರೆಗೂ ಸಾಕಷ್ಟು ವನ್ಯಪ್ರಾಣಿಗಳು ರಸ್ತೆ ದಾಟಿವೆ. ಸಾರ್ವಜನಿಕರ ಕಣ್ಣಿಗೆ ಕಾಣಿಸಿಕೊಂಡಿರಲಿಲ್ಲ. ಹುಲಿ ರಸ್ತೆ ದಾಟುತ್ತಿರುವುದು ಕಂಡು ಬಂದಿದೆ ಎಂದು ಜನರು ಭಯಬೀತರಾಗುವ ಅವಶ್ಯಕತೆಯಿಲ್ಲ. ಪ್ರತಿಯೊಂದು ಹುಲಿಯೂ ತನ್ನದೇ ಆವಾಸ ಸ್ಥಾನ ಹುಡುಕಿಕೊಂಡಿರುತ್ತವೆ. ಮತ್ತೊಂದು ಹುಲಿ ಅಲ್ಲಿಗೆ ಬಂದಾಗ ಹೀಗೆ ಬೇರೊಂದು ಆವಾಸಸ್ಥಾನ ಹುಡುಕಿಕೊಂಡು ಬರುತ್ತವೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಿಲ್ಲ’ ಎಂದರು.